ಕೊಪ್ಪಳ: ತುಂಗಾಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಡುವ ವಿಚಾರವಾಗಿ ರೈತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಲಾಗುತ್ತಿದೆ. ರೈತರು ಹಾಗೂ ಮುಖಂಡರ ಸಲಹೆ ಪಡೆದು, ಅವರಿಂದ ಮಾಹಿತಿ ಸಂಗ್ರಹಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಒಟ್ಟಾರೆ ನಮ್ಮ ರೈತರಿಗೆ ಒಳ್ಳೆಯ ಸುದ್ದಿ ನೀಡುವ ಕೆಲಸ ಮಾಡುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕಾಲುವೆಗಳಿಗೆ ನೀರು ಹರಿಸುವ ವಿಚಾರ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳ ಕುರಿತು ಮುನಿರಾಬಾದ್ನಲ್ಲಿಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನೀರು ಬಿಡುವ ವಿಚಾರದಲ್ಲಿ ರೈತರಿಂದ ಸಲಹೆ ಪಡೆದು, ನೀರು ಎಷ್ಟಿದೆ ಎಂಬ ಕುರಿತು ಮಾಹಿತಿ ಪಡೆದು ನಿರ್ಧಾರ ನಡೆಸುತ್ತೇವೆ. ಎಲ್ಲಾ ನಾವೇ ನಿರ್ಧಾರ ಮಾಡುವುದಾದರೆ, ರೈತರನ್ನು ಯಾಕೆ ಕರೆಯಬೇಕು?. ಎಲ್ಲರಿಂದ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ. ಇದಕ್ಕೆ ಸಮಾಯವಕಾಶ ನೀಡಬೇಕು ಎಂದರು
Laxmi News 24×7