Breaking News

ಡಿಜಿಟಲ್ ಬ್ಯಾಂಕಿಂಗ್‌ನಿಂದ ಅನುಕೂಲ

Spread the love

ಬೋರಗಾಂವ: ಇಂದಿನ ಯುಗದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯ. ಆದ್ದರಿಂದ ಸಂಸ್ಥೆಯಲ್ಲಿ
ಕ್ಯೂಆರ್ ಕೋಡ್ ಮತ್ತು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನಾವರಣಗೊಳಿಸುವ ಮೂಲಕ ಡಿಜಿಟಲ್ ಬ್ಯಾಂಕಿಂಗ್‌ಗೆ ಅವಕಾಶ ಕಲ್ಪಿಸಿದ್ದೇವೆ ಎಂದು ಅರಿಹಂತ ಸೊಸೈಟಿ ಅಧ್ಯಕ್ಷ ಅಭಿನಂದನ ಪಾಟೀಲ ಹೇಳಿದರು.
ಅರಿಹಂತ ಸೊಸೈಟಿಯಲ್ಲಿ ಶನಿವಾರ ಡಿಜಿಟಲ್ ಮೊಬೈಲ್ ಅಪ್ಲಿಕೇಶನ್ ಮತ್ತು ಕ್ಯೂಆರ್ ಕೋಡ್ ಅನಾವರಣಗೊಳಿಸಿ ಮಾತನಾಡಿ, ಡಿಜಿಟಲ್ ವಹಿವಾಟುಗಳು ಪಾರದರ್ಶಕತೆ ಹೆಚ್ಚಿಸುತ್ತವೆ, ಐಎ್ಎಸ್‌ಸಿ ಕೋಡ್, ಕ್ಯೂಆರ್ ಕೋಡ್, ಮೊಬೈಲ್ ಅಪ್ಲಿಕೇಶನ್ ಗ್ರಾಹಕರು ಬ್ಯಾಂಕಿನ ವ್ಯವಹಾರ ನಡೆಸಲು ಉಪಯುಕ್ತವಾಗುತ್ತವೆ. ಸುಲಭ ಮತ್ತು ಸುರಕ್ಷತೆಗಾಗಿ ಅಪ್ಲಿಕೇಶನ್ ಪ್ರಾರಂಭಿಸಿದ್ದು, ಎಲ್ಲ ಗ್ರಾಹಕರು ಇದರ ಲಾಭ ಪಡೆದುಕೊಳ್ಳಬೇಕು. ಗ್ರಾಹಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ, ಆಧುನಿಕ ತಂತ್ರಜ್ಞಾನ ಮೂಲಕ ಗ್ರಾಹಕರಿಗೆ
ಸೇವೆ ಸಲ್ಲಿಸುವ ಗುರಿಯೊಂದಿಗೆ  ಡಿಜಿಟಲ್ ಬ್ಯಾಂಕಿಂಗ್ ಸೇವೆ ಪ್ರಾರಂಭಿಸಲಾಗಿದೆ ಎಂದರು.
ಸಂಸ್ಥೆ ನಿರ್ದೇಶಕ ಉತ್ತಮ ಪಾಟೀಲ, ಉಪಾಧ್ಯಕ್ಷ ಸತೀಶ ಪಾಟೀಲ, ನಿರ್ದೇಶಕ ಸುಭಾಸ ಶೆಟ್ಟಿ, ಪೀರಗೌಡ ಪಾಟೀಲ, ಅಭಯಕುಮಾರ ಕರೋಲೆ, ಪ್ರಹ್ಲಾದ ಕಡೋಲೆ, ಭುಜಗೌಡ ಪಾಟೀಲ, ಶರದ್‌ಕುಮಾರ ಲಡಗೆ, ಸಂದೀಪ ಪಾಟೀಲ, ಜೈಪಾಲ ನಾಗಾವೆ, ಶ್ರೀಕಾಂತ ವಾಸವಾಡೆ, ಶಿವಾನಂದ ರಾಜಮಾನೆ, ಬಾಬಾಸಾಹೇಬ ಅ್ರಾಜ್, ನಿರ್ಮಲಾ ಬಲ್ಲೋಳೆ, ಅನಿತಾ ಮಗದುಮ್ಮ, ಅಜಿತ ಕಾಂಬಳೆ, ಸಿಇಒ ಅಶೋಕ ಬಂಕಾಪುರೆ, ಸಹಾಯಕ ವ್ಯವಸ್ಥಾಪಕ ಅಭಯಕುಮಾರ ಖೋತ, ಅಭಿನಂದನ ಬೆನಾಡೆ, ಭರತ ಗುಂಡೆ ಇತರರಿದ್ದರು.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ