ಬೆಳಗಾವಿ: ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿ ಎಂದು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ಸೋಮವಾರ ಬೆಳಗಾವಿ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಹಜರತ್ ಸೈಯ್ಯದ ಮುರಾದಲಿ ಶಾ ದರ್ಗಾದಲ್ಲಿ ಪ್ರಾರ್ಥನೆ ಪ್ರಾರ್ಥನೆ ಸಲ್ಲಿಸಲಾಗಿದೆ.
ಕಾಂಗ್ರೇಸ್ ಕಾರ್ಯಕರ್ತೆ ಆಯೇಶಾ ಸನದಿ ನೇತೃತ್ವದಲ್ಲಿ ಮುರಾದಲಿ ಶಾಗೆ ಹೂವಿನ ಹೊದಿಕೆ ಅರ್ಪಿಸಿ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷಗಿರಿ ಹಾಗೂ ಡಿಸಿಎಂ ಹುದ್ದೆ ಸಿಗಲೆಂದು ಕೈಯಲ್ಲಿ ಬಿತ್ತಿ ಪತ್ರ ಹಿಡಿದ ಜೈಕಾರ ಕೂಗಿದ ಪ್ರಾರ್ಥನೆ ಸಲ್ಲಿಸಲಾಗಿದೆ.
Laxmi News 24×7