Breaking News

ರೇಣುಕಾಚಾರ್ಯರ ತತ್ವಗಳು ಸಮಾಜಕ್ಕೆ ಪ್ರೇರಣೆ: ಮುರುಂದ್ರ ಸ್ವಾಮೀಜಿ

Spread the love

ಸವದತ್ತಿ: ಸಮಾನತೆ, ಸಾಮರಸ್ಯ ಹಾಗೂ ಸಂಸ್ಕಾರಗಳ ಮಹತ್ವ ಸಾರಿದ ಜಗದ್ಗುರು ರೇಣುಕಾಚಾರ್ಯರ ತತ್ವಗಳು ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ತಹಸೀಲ್ದಾರ್​ ಕಚೇರಿಯಲ್ಲಿ ತಾಲೂಕಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೇಣುಕಾಚಾರ್ಯರ ಉಪದೇಶಗಳು ಶಾಂತಿ ಮತ್ತು ಸೌಹಾರ್ದ ಬಲಪಡಿಸುವಲ್ಲಿ ಮಾರ್ಗದರ್ಶಕವಾಗಿವೆ ಎಂದರು.
ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗನ್ನವರ, ಉದ್ಯಮಿ ಅಶ್ವತ್ಥ ವೈದ್ಯ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದ ಬೆಳವಣಿಗೆಗೆ ರೇಣುಕಾಚಾರ್ಯರ ಸಂದೇಶಗಳು ಪ್ರಸ್ತುತವಾಗಿವೆ ಎಂದರು.
ಅಲ್ಲಮಪ್ರಭು ಪ್ರಭುನವರ, ಶ್ರೇಯಸ್​ ಮಾಮನಿ, ಕುಮಾರಸ್ವಾಮಿ ತಲ್ಲೂರಮಠ, ದೀಪಕ ಜಾನ್ವೇಕರ, ಐ.ಪಿ.ಪಾಟೀಲ, ಸೋಮಯ್ಯ ಗುದೈನವರಮಠ, ಬಿ.ಎನ್​.ಹಿರೇಮಠ, ಎಚ್​.ಪಿ.ಪಾಟೀಲ, ಸಿದ್ದಯ್ಯ ಕಾಡದೇವರಮಠ, ಈರಯ್ಯ ಕಾಂತಿಮಠ, ಸಿದ್ದಯ್ಯ ಹಿರೇಮಠ, ದುಂಡಯ್ಯ ರಾಮರಡ್ಡಿಮಠ, ಕುಮಾರ ಹಿರೇಮಠ ಇತರರಿದ್ದರು.

Spread the love

About Laxminews 24x7

Check Also

ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ ಹಾಗೂ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ!

Spread the loveಸವದತ್ತಿ ಪಟ್ಟಣದ ಗುರು ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ