Breaking News

ಜಿಎಸ್​ಟಿ ಸರಳೀಕರಣದಿಂದ ಆದಾಯ ನಷ್ಟದ ಭೀತಿ: ಸಂದಿಗ್ಧತೆಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರದ ಮುಂದೆ ಸೀಮಿತ ಆಯ್ಕೆ

Spread the love

ಬೆಂಗಳೂರು: ಜಿಎಸ್​ಟಿ (Goods and Services Tax) ತೆರಿಗೆ ಸರಳೀಕರಣ ಮಾಡುವ ಮೂಲಕ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಆದಾಯ ನಷ್ಟದ ಆತಂಕ ಎದುರಾಗಿದೆ. ಜಿಎಸ್​ಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಆದರೆ, ಕೇಂದ್ರದ ಜಿಎಸ್​ಟಿ ದರ ಸರಳೀಕರಣ ಹಾಗೂ ಆದಾಯ ನಷ್ಟದ ಆತಂಕದ ಮಧ್ಯೆ ರಾಜ್ಯ ಸರ್ಕಾರ ಇದೀಗ ಸಂದಿಗ್ದತೆಯಲ್ಲಿ ಸಿಲುಕಿಕೊಂಡಿದೆ.

ಇನ್ಮುಂದೆ 5% ಮತ್ತು 18% ಮಾತ್ರ ಜಿಎಸ್​ಟಿ ಇರಲಿದ್ದು, ಐಶಾರಾಮಿ, ಟೊಬ್ಯಾಕೋ ಸಂಬಂಧಿತ ಉತ್ಪನ್ನಗಳಿಗೆ 40% ಜಿಎಸ್​ಟಿ ವಿಧಿಸಲಾಗುತ್ತದೆ. ಜಿಎಸ್​ಟಿ ದರ ಸರಳೀಕರಣವು ಜನರಿಗೆ ಸಿಹಿ ಸುದ್ದಿಯಾದರೂ ಈ ಮಾರ್ಪಾಡು ರಾಜ್ಯ ಸರ್ಕಾರವನ್ನು ಆತಂಕಕ್ಕೆ ತಳ್ಳಿದೆ. ಈಗಾಗಲೇ ಪಂಚ ಗ್ಯಾರಂಟಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ, ಜಿಎಸ್​ಟಿ ದರ ಸರಳೀಕರಣದಿಂದ ಮತ್ತಷ್ಟು ಆದಾಯ ನಷ್ಟದ ಭೀತಿಗೆ ಸಿಲುಕಿದೆ.

ಕರ್ನಾಟಕ ಸರ್ಕಾರ ಜಿಎಸ್​ಟಿ ದರ ಸರಳೀಕರಣದಿಂದ ವಾರ್ಷಿಕ ಸುಮಾರು 15,000 ಕೋಟಿ ರೂ. ಹೆಚ್ಚುವರಿ ಆದಾಯ ನಷ್ಟದ ಅಂದಾಜು ಮಾಡಿದೆ. ಹೆಚ್ಚಿನ ಸಂಪನ್ಮೂಲ ಕ್ರೋಢೀಕರಣದ ಕಸರತ್ತು ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಜಿಎಸ್​ಟಿ ದರ ಸರಳೀಕರಣ ಅಡ್ಡಗತ್ತರಿಯಲ್ಲಿ ಸಿಲುಕಿಸಿದಂತಾಗಿದೆ. ದರ ಸರಳೀಕರಣವನ್ನು ಸ್ವಾಗತಿಸಿದ್ದರೂ, ಇತ್ತ ಆದಾಯ ನಷ್ಟದ ಭೀತಿ ಹೆಚ್ಚಾಗಿ ಕಾಡುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಆದಾಯ ಸಂಗ್ರಹದ ತೆಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ.‌

ಆದಾಯ ನಷ್ಟದ ಲೆಕ್ಕಾಚಾರ ಏನು? ರಾಜ್ಯ ಸರ್ಕಾರ ಹೇಳುವಂತೆ ಈ ಜಿಎಸ್​ಟಿ ದರ ಸರಳೀಕರಣದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ಸುಮಾರು 15,000 ಕೋಟಿ. ರೂ.ನಷ್ಟು ಹೆಚ್ಚುವರಿ ಆದಾಯ ನಷ್ಟದ ಅಂದಾಜು ಮಾಡಿದೆ. ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸಚಿವ ಕೃಷ್ಣ ಬೈರೇಗೌಡ ವಿವರಿಸುವಂತೆ, ಜಿಎಸ್​ಟಿ ಬಂದಾಗಿನಿಂದಲೂ ಈವರೆಗೆ ಹಂತ ಹಂತವಾಗಿ ತೆರಿಗೆ ಕಡಿತ ಮಾಡಲಾಗಿದೆ. ಜಿಎಸ್​ಟಿ ಜಾರಿಯಾಗುವ ಮುನ್ನ ನಿವ್ವಳ ತೆರಿಗೆ ದರ 14% ಇದ್ದರೆ, ಈಗ ಅದು 11% ದರ ಇದೆ.‌ ಸರಳೀಕರಣ ಮಾಡುವುದರಿಂದ ಅದರಲ್ಲಿ ಮತ್ತೆ 1%ರಷ್ಟು ಕಡಿತವಾಗಿ ಸುಮಾರು ಅಂದಾಜು 10%ಗೆ ಇಳಿಕೆಯಾಗಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ವ್ಯಾಟ್ ಇದ್ದಾಗ 3.6% ಆದಾಯ ಬರುತ್ತಿತ್ತು. ಈಗ 2.9% ಮಾತ್ರ ಆದಾಯ ಬರುತ್ತಿದೆ. ಈಗ ರಾಜ್ಯದ ಜಿಎಸ್​ಡಿಪಿಯ (Gross State Domestic Product) 2.9%ರಷ್ಟು ಆದಾಯ ಬರುತ್ತಿದೆ. ಇದರಿಂದ ಕರ್ನಾಟಕದಲ್ಲಿ 2024-25ರಲ್ಲಿ 30,677 ಕೋಟಿ ರೂ. ಆದಾಯ ಖೋತಾ ಆಗಿದೆ. 2023-24ರಲ್ಲಿ 24,170 ಕೋಟಿ ರೂ. ಮತ್ತು 2022-23ರಲ್ಲಿ 22,654 ಕೋಟಿ ಆದಾಯ ಖೋತ ಆಗಿತ್ತು. ಕೇಂದ್ರದ ರಾಜ್ಯದ ತೆರಿಗೆ ಪಾಲಿನಲ್ಲಿ 2016-17ಗೆ ಮತ್ತು 2024-25ಕ್ಕೆ ಹೋಲಿಕೆ ಮಾಡಿದರೆ ರಾಜ್ಯಕ್ಕೆ 21,977 ಕೋಟಿ ರಷ್ಟು ಕಡಿತವಾಗಿದೆ. ಅದೇ ರೀತಿ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನದಲ್ಲಿ 18,880 ಕೋಟಿ ರೂ. ಕಡಿತವಾಗಿದೆ. ಆ ಮೂಲಕ ಇವೆರಡರಿಂದ 40,857 ಕೋಟಿ ರೂ. ಒಟ್ಟು ಕಡಿತವಾಗಿದೆ. ಕೇಂದ್ರದ ತೆರಿಗೆಯಲ್ಲಿ ನಮ್ಮ ಪಾಲು 35%ರಿಂದ 23%ಗೆ ಇಳಿದಿದೆ. ಕೇಂದ್ರದ ಈ ಎಲ್ಲಾ ತೀರ್ಮಾನಗಳಿಂದ ನಮಗೆ ಆಗಿರುವ ಆದಾಯ ಖೋತಾ ವಾರ್ಷಿಕ 70,000 ಕೋಟಿ ರೂ. ಹೊಸ ಜಿಎಸ್​ಟಿ ದರಗಳಿಂದ ರಾಜ್ಯಕ್ಕೆ ಇನ್ನೂ 15,000 ಕೋಟಿ ರೂ‌.‌ ಹೆಚ್ಚುವರಿ ಆದಾಯ ನಷ್ಟ ಆಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ