ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ಸಾಧನೆ…
ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ಸಾಧನೆಯನ್ನು ಮಾಡಿದ್ದು, ಚಿನ್ನ ಮತ್ತು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡು ಬೆಳಗಾವಿಯ ಕೀರ್ತಿಯನ್ನು ಹೆಚ್ಚಿಸಿದೆ.
ಆಗಸ್ಟ್ 3 ರಂದು ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕರಾಟೆ ಸ್ಪರ್ಧೆ ನಡೆಯಿತು. ಇದರಲ್ಲಿ ಬೆಳಗಾವಿಯ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯಾದ ಒಟ್ಟು 1200 ಕರಾಟೆ ವಿದ್ಯಾರ್ಥಿಗಳು ಭಾಗಿಯಾಗಿದ್ಧರು.
14 ವರ್ಷ ವಯೋಮಾನದ ವಿಭಾಗದಲ್ಲಿ ಗಿರೀಶ್ ಜಂಗನ್ನವರ, ಸುಕೀತ್ ಗಲಗಲಿ, ಕ್ರಾಂತಿ ಪಾಟೀಲ್, ಪೃಥ್ವಿರಾಜ್ ದೇಸಾಯಿ, ಕೃಷ್ಣಾ ಅಲವಾಡಿ, ಪ್ರಣಯಕುಮಾರ ಗೋಣಿ, ಸಮರ್ಥ್ ಪಾಟೀಲ್, ಓಂ ಗಾವಡೆ, ಅಚ್ಯುತ್ ನಾಯಕ ಚಿನ್ನ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರಿಗೆ ಅಂತರಾಷ್ಟ್ರೀಯ ಕರಾಟೆ ಮಾಸ್ಟರ್ ಮಧು ಪಾಟೀಲ್, ಆಕಾಶ್ ಪಾಟೀಲ್, ಮುನೀರ್ ಪಾಶಾ , ಪ್ರವೀಣ್ ರಂಕಾ, ಸ್ವಾತಿ ವಾಳವೆ, ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಅವರ ಪ್ರೋತ್ಸಾಹ ದೊರೆತಿದೆ.
Laxmi News 24×7