ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಪಂಚಮಸಾಲಿ ಶ್ರೀ
ಹೊರಗಡೆ ಏನೇನು ಬೆಳವಣಿಗೆ ನಡೆದಿದೆ ಗೊತ್ತಿಲ್ಲ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ!
ನಾನು ಭಕ್ತರಿಗೆ ಈಗ ಧೈರ್ಯ ಮಾತ್ರ ಹೇಳತ್ತಿನಿ ಕಾಶಪ್ಪನವರ ಪೀಠಾಧಿಪತಿ ಬದಲಾವಣೆ ಬಗ್ಗೆ ಮಾತನಾಡಿದ ವಿಚಾರದ ಬಗ್ಗೆ ಹಾಗೂ ಹೊರಗಡೆ ಏನೇನು ಬೆಳವಣಿಗೆ ನಡೆದಿದೆ ಗೊತ್ತಿಲ್ಲ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿ, ಕಳೆದ ನಾಲ್ಕು ದಿನಗಳಿಂದ ಆದ ಬೆಳವಣಿಗೆಗಳಿಂದ ಅಸಮಾಧಾನವಾಗಿತ್ತು ಬೆಳಿಗ್ಗೆ ವಾಕಿಂಗ್ ಮಾಡುವಾಗ ಎದೆನೋವು ,ವಾಂತಿ ಕಾಣಿಸಿಕೊಂಡಿತ್ತ ಆಗ ಭಕ್ತರು ವೈದ್ಯರನ್ನು ಸಂಪರ್ಕ ಮಾಡಿದಾಗ ವೈದ್ಯರು ಆಸ್ಪತ್ರೆಗೆ ಬರುವಂತೆ ಹೇಳಿದರು ವೈದ್ಯರು ಹಾಗೂ ಸಿಬ್ಬಂದಿ ಮಾಡಿದ ಆರೈಕೆ, ಭಕ್ತರ ಪ್ರಾರ್ಥನೆ ಪರಿಣಾಮವಾಗಿ ಗುಣಮುಖನಾಗಿದ್ದೇನೆ
ಯಾರೂ ಭಕ್ತರು ಆತಂಕಕ್ಕೆ ಒಳಗಾಗಬಾರದು ನೇರವಾಗಿ ಪೀಠಕ್ಕೆ ಹೋಗಿ ಎರಡು ದಿನ ಪೀಠದಲ್ಲಿರುತ್ತೆನೆ ಕಾಶಪ್ಪನವರ ಪೀಠಾಧಿಪತಿ ಬದಲಾವಣೆ ಬಗ್ಗೆ ಮಾತನಾಡಿದ ವಿಚಾರದ ಬಗ್ಗೆ ಹಾಗೂ ಹೊರಗಡೆ ಏನೇನು ಬೆಳವಣಿಗೆ ನಡೆದಿದೆ ಗೊತ್ತಿಲ್ಲ ಎಂದರು
Laxmi News 24×7