ನಂದಗಡ ಠಾಣೆಯ ಪೊಲೀಸ್ ಮೆಂಡಿಗೇರಿಗೆ ಎಸ್ಪಿ ಪ್ರಶಂಸನಾ ಪತ್ರ
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಅವರಿಂದ ವಿತರಣೆ
ಐತಿಹಾಸಿಕ ಪುಣ್ಯ ಭೂಮಿ ನಂದಗಡದ ಗ್ರಾಮದಲ್ಲಿರುವ ಪೋಲಿಸ್ ಠಾಣೆಯ ಪೊಲೀಸರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಿದಾನಂದ ಮೆಂಡಿಗೇರಿ ಅವರಿಗೆ ಬೆಳಗಾವಿ ಹೆಚ್ಚುವರಿ ಅಧಿಕ್ಷಕರಾದ ರಾಮಗೊಂಡ ಬಸರಗಿ ಅವರಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಚಿದಾನಂದ ಮೆಂಡಿಗೇರಿ ಅವರು ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಠಾಣೆಯ ಅವಧಿ ಮೀರದ ದಾಖಲೆಗಳ ವಿಲೇವಾರಿ ಹಾಗೂ ಜಪ್ತಾದ ವಾಹನ ಮತ್ತು ಹಳೇಯ ಮುದ್ದೇಮಾಲುಗಳ ವಿಲೇವಾರಿ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹೀಸುತ್ತಿರಿ
ಈ ನಿಮ್ಮ ಕರ್ತವ್ಯ ಶ್ಲಾಘನೀಯವಾಗಿದ್ದು ಮೆಚ್ಚುಗೆ ಪಾತ್ರರಾಗಿದ್ದಿರಿ ಎಂಬ
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಅವರು ಸಹಿ ಹಾಕಿದ ಪ್ರಶಂಶನಾ ಪಾತ್ರವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಅವರ ಹಸ್ತದಿಂದ ಚಿದಾನಂದ ಮೆಂಡಿಗೇರಿ ಅವರಿಗೆ ವಿತರಣೆ ಮಾಡಿ ಪ್ರೋತ್ಸಾಹಿಸಿ ಗೌರವಿಸಲಾಯಿತು ಈ ಸಭೆಯಲ್ಲಿ ಬೈಲಹೊಂಗಲ ಉಪ ವಿಭಾಗದ ಡಿವೈಎಸ್ಪಿ ಡಾ ವೀರಯ್ಯ ಹಿರೇಮಠ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7