Breaking News

ಕಸದ ರಾಶಿಯಲ್ಲಿ ಮುಳುಗಿರುವ ಬೆಳಗಾವಿ ಅಜಮ್ ನಗರದ ಮೊದಲನೇ ಕ್ರಾಸ್…

Spread the love

ಕಸದ ರಾಶಿಯಲ್ಲಿ ಮುಳುಗಿರುವ ಬೆಳಗಾವಿ ಅಜಮ್ ನಗರದ ಮೊದಲನೇ ಕ್ರಾಸ್…
ಕಸ ವಿಲೇವಾರಿಯಾಗುತ್ತಿಲ್ಲ, ನಾಯಿಗಳ ಹಾವಳಿ, ಗಬ್ಬು ವಾಸನೆ…
ಪಾಲಿಕೆ ನಿರ್ಲಕ್ಷಕ್ಕೆ ಹಿಡಿ ಶಾಪ ಹಾಕುತ್ತಿರುವ ನಿವಾಸಿಗಳು…..
ಬೆಳಗಾವಿ ಅಜಂನಗರ ಕೆಎಲ್ಇ ಕಂಪೌಂಡ ಪಕ್ಕದಲ್ಲಿರುವ ಮೊದಲೇ ಕ್ರಾಸ್ ನಲ್ಲಿ ಬಿದ್ದಿರುವ ಕಸದ ರಾಶಿಯನ್ನು ನೋಡಿದರೆ ಅಕ್ಷರಶಹ ತ್ಯಾಜ್ಯ ವಿಲೇವಾರಿ ಘಟಕದಂತಾಗಿದ್ದು, ಪಾಲಿಕೆ ನಿರ್ಲಕ್ಷ್ಯಕ್ಕೆ ಇಲ್ಲಿಯ ನಿವಾಸಿಗಳು ಹಿಡಿ ಶಾಪ ಹಾಕುತ್ತಿದ್ದಾರೆ
ಅಜಮ್ ನಗರ ಮಹಾನಗರ ಪಾಲಿಕೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಸ ಒಯ್ಯುವ ವಾಹನವು ದಿನಾಲು ಅಜಮನಗರಕ್ಕೆ ಬರುತ್ತಿಲ್ಲ. ಹೀಗಾಗಿ ಜನ ರಸ್ತೆಯ ಬದಿಯಲ್ಲಿ ಕಸವನ್ನು ಚೆಲ್ಲುತ್ತಿದ್ದಾರೆ. ವಾಹನ .ಮೂರು ದಿನಕ್ಕೊಮ್ಮೆ ಬರುತ್ತದೆ. ಹೀಗಾಗಿ ರಸ್ತೆಯ ಬದಿಗೆ ಬಿದ್ದ ಕಸವು ರಸ್ತೆಯ ತುಂಬೆಲ್ಲ ಹರಿದಾಡುತ್ತದೆ . ಜನರಿಗೆ ಮತ್ತು ವಾಹನಗಳಿಗೆ ತುಂಬಾ ತೊಂದರೆಯಾಗಿದ್ದು, ದಿನವಿಡಿ ಬೀದಿನಾಯಿಗಳು ಕಸದ ಚೀಲಗಳನ್ನು ಹರಿದು ಚಲ್ಲಾಪಿಲ್ಲಿ ಮಾಡಿ ಗಬ್ಬು ವಾಸನೆ ಹೊಡೆಯುತ್ತದೆ.
ಇದರಿಂದ ಸಾಂಕ್ರಾಮಿಕ ರೋಗ ಹಬ್ಬುವ ಸ್ಥಿತಿ ಇಲ್ಲಿಯದಾಗಿದೆ .ಕಸದ ವಾಹನ ಪ್ರತಿದಿನ ಬರಬೇಕೆಂದು ಎಷ್ಟು ಸಲ ಹೇಳಿದರೂ ಸಹ ಅವರು ಕೇಳುತ್ತಿಲ್ಲ . ಬೀದಿ ದೀಪಗಳು ಸಹ ದಿನಾಲೂ ಹತ್ತುವುದಿಲ್ಲ
ಅಲ್ಲದೆ ಅಜಾಮ್ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ನೂರಕ್ಕೂ ಹೆಚ್ಚಾಗಿದೆ.ಅವುಗಳಲ್ಲಿ ಕೆಲವೊಂದು ನಾಯಿಗಳು ಹುಚ್ಚ ನಾಯಿಗಳಾಗಿವೆ. ಹೀಗಾಗಿ ಸಣ್ಣ ಮಕ್ಕಳಿಗೆ ಬೆನ್ನು ಹತ್ತಿ ಕಚ್ಚಲು ಹಾಗೂ ರಾತ್ರಿ ಇಡಿ ಬೊಗಳುತ್ತಾ ನಾಗರಿಕರ ನಿದ್ದೆಯನ್ನು ಕೆಡಿಸಿವೆ. ಅವುಗಳನ್ನು ಹಿಡಿದುಕೊಂಡು ಹೋಗಿ ಅರಣ್ಯದಲ್ಲಿ ಬಿಡಬೇಕು .ಈಗಾಗಲೇ ನಾವು ಮಹಾನಗರ ಪಾಲಿಕೆಗೆ ಬಂದು ಮೌಖಿಕವಾಗಿ ಸಮಸ್ಯೆ ಬಗೆಹರಿಸಲು ಹೇಳಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ
ಪಾಲಿಕೆ ಆಯುಕ್ತರು ಈ ಕಡೆಗೆ ಗಮನ ಹರಿಸಿ ಅಜಮ್ ನಗರವನ್ನು ಸ್ವಚ್ಛತೆ ಮಾಡಿ ಸಂಕ್ರಾಮಿಕ ರೋಗ ಹಬ್ಬದಂತೆ ಜನರ ಆರೋಗ್ಯವನ್ನು ಮತ್ತು ಅಜಮ್ ನಗರದ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೆ ಗಮನಹರಿಸಬೇಕೆಂದು ಅಜಂನಗರ ನಾಗರಿಕರು ಆಗ್ರಹಿಸಿದ್ದಾರೆ.

Spread the love

About Laxminews 24x7

Check Also

ತ್ರೈಮಾಸಿಕ ಕೆ.ಡಿ.ಪಿ ಸಭೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ

Spread the love ಉಡುಪಿ; ತ್ರೈಮಾಸಿಕ ಕೆ.ಡಿ.ಪಿ ಸಭೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ