ಬೆಳಗಾವಿಯಲ್ಲಿ ಶಿವಕಾಲಿನ ಸಮರ ಕಲೆಗಳ ತರಬೇತಿ…
ಸ್ವರಕ್ಷಣಾ ತರಬೇತಿ ಶಿಬಿರಕ್ಕೆ ಬೆಳಗಾವಿಗರಿಂದ ಉತ್ತಮ ಪ್ರತಿಕ್ರಿಯೆ
ಬೆಳಗಾವಿಯ ಸವ್ಯಸಾಚಿ ಗುರುಕುಲಂ, ಶ್ರೀ ಕ್ಷೇತ್ರ ದಕ್ಷಿಣ ಕಾಶಿ ಕಪಿಲೇಶ್ವರ ದೇವಸ್ಥಾನ ಮತ್ತು ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನ್ ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ ಶಿವಕಾಲೀನ ಸಮರ ಕಲೆಗಳು ಮತ್ತು ಸ್ವರಕ್ಷಣಾ ತರಬೇತಿ ಶಿಬಿರಕ್ಕೆ ಬೆಳಗಾವಿಗರಿಂದ ಉತ್ಸಾಹಭರಿತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶ್ರೀ ಕ್ಷೇತ್ರ ದಕ್ಷಿಣ ಕಾಶಿ ಕಪಿಲೇಶ್ವರ ದೇವಸ್ಥಾನದ ಪ್ರದೇಶದಲ್ಲಿ ಆಯೋಜಿಸಲಾದ ಈ ಶಿಬಿರದಲ್ಲಿ 10 ರಿಂದ 60 ವರ್ಷ ವಯಸ್ಸಿನವರು ಭಾಗಿಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಈ ಶಿಬಿರವನ್ನು ನಡೆಸಲಾಗುತ್ತಿದೆ. ಈ ವರ್ಷದ ಮೇ ತಿಂಗಳಿನಲ್ಲಿಯೂ ಧರ್ಮವೀರ್ ಸಂಭಾಜಿ ಉದ್ಯಾನವನದಲ್ಲಿ ನಡೆಯಿತು. ಈ ಶಿಬಿರದಲ್ಲಿ ಚಿಕ್ಕಮಕ್ಕಳು, ಯುವಕ, ಯುವತಿಯರು ಮತ್ತು ಹಿರಿಯ ನಾಗರಿಕರು ಸೇರಿದಂತೆ 250 ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದಾರೆ. ಅಲ್ಲದೇ ಈ ತರಬೇತಿಯಲ್ಲಿ ಬೆಳಗಾವಿಯಷ್ಟೇಯಲ್ಲದೇ ಜೊಹುಬ್ಬಳ್ಳಿ, ಧಾರವಾಡ ಮತ್ತು ಗದಗದ ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದು, ವಿಶೇಷವಾಗಿದೆ.
ಶಿವಯುಗದ ಸಮರ ಕಲೆಗಳನ್ನು ಕಲಿಸುವುದರ ಜೊತೆಗೆ ಆತ್ಮರಕ್ಷಣೆಯ ಪಾಠಗಳನ್ನು ಕಲಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಆತ್ಮರಕ್ಷಣೆಯ ಮಹತ್ವ ಹೆಚ್ಚಿದ್ದು, ಈ ತರಬೇತಿ ದೈಹಿಕ ಸುರಕ್ಷತೆಗೆ ಮಾತ್ರವಲ್ಲದೆ ಆತ್ಮವಿಶ್ವಾಸ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹ ಉಪಯುಕ್ತವಾಗಿದೆ. ಇದು ಮಕ್ಕಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಶಿಬಿರವು ಪುರುಷಪ್ರಧಾನ ಕ್ರೀಡೆಗಳು, ಆಯುಧಗಳು ಮತ್ತು ಅವುಗಳ ಪ್ರಾಮುಖ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ. ಶಿವಕಾಲೀನ ಸಾಂಪ್ರದಾಯಿಕ ಆಯುಧಗಳಾದ ಲಾಠಿ, ಕತ್ತಿಗಳು, ದಾನಪಟ್ಟಾ ಮತ್ತು ಈಟಿಗಳ ತರಬೇತಿಯ ಜೊತೆಗೆ, ಸೂರ್ಯ ನಮಸ್ಕಾರ, ದಂಡ ಸೇರಿದಂತೆ ಇನ್ನುಳಿದ ಸಾಂಪ್ರದಾಯಿಕ ವ್ಯಾಯಾಮಗಳನ್ನು ಸಹ ಕಲಿಸಲಾಗುತ್ತದೆ ಎನ್ನುತ್ತಾರೆ ತರಬೇತುದಾರರು.
ಶ್ರೀ ಕ್ಷೇತ್ರ ದಕ್ಷಿಣ ಕಾಶಿ ಕಪಿಲೇಶ್ವರ ದೇವಸ್ಥಾನದ ಟ್ರಸ್ಟಿ ಅಭಿಜಿತ್ ಚವ್ಹಾಣ್ ಅವರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಬಾಲಸಂಸ್ಕಾರದೊಂದಿಗೆ ಜೊತೆಗೆ ಪ್ರಾಚೀನ ಮತ್ತು ಶಿವಕಾಲಿನ ಸಮರ ಕಲೆಗಳ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ ಎಂದು ಹೆಚ್ಚಿನ ಮಾಹಿತಿಯನ್ನು ನೀಡಿದರು.
ಶಿಬಿರಾರ್ಥಿ ಭಾರತಿ ಕೋಟಗಿ ಅವರು ಶಿವಕಾಲಿನ ಆಯುಧಗಳು ಕಣ್ಮರೆಯಾಗುತ್ತಿರುವಾಗ, ಈ ಸಂಪ್ರದಾಯ ಮತ್ತು ಕಲೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಶ್ಲಾಘನೀಯ. ಮಹಿಳೆಯರಿಗೆ ಆತ್ಮರಕ್ಷಣೆಗಾಗಿ ಈ ಶಿಬಿರ ಅದ್ಭುತವಾಗಿದೆ ಎಂದು ಹೇಳಿದರು. ಮತ್ತೊಂದೆಡೆ, ಶರ್ವರಿ ದಡ್ಡಿಕರ್, ಶಿಬಿರವು ಉಪಯುಕ್ತವಾಗಿತ್ತು ಎಂದು ಹೇಳಿದರು, ಕೋಲುಗಳು, ಈಟಿಗಳು ಮತ್ತು ಕತ್ತಿಗಳಂತಹ ಆಯುಧಗಳು ಮತ್ತು ವ್ಯಾಯಾಮಗಳನ್ನು ಕಲಿಯಲು ನನಗೆ ಅವಕಾಶ ಸಿಕ್ಕಿತು ಎಂದು ಹರ್ಷ ವ್ಯಕ್ತಪಡಿಸಿದರು.
ಶಿಬಿರದ ಇನ್ನೋರ್ವ ಪ್ರಶಿಕ್ಷಣಾರ್ಥಿ ವೈಷ್ಣವಿ ಕಾಕತೀಕರ ಅವರು ಸಹ ಈ ಉಪಕ್ರಮವನ್ನು ಶ್ಲಾಘಿಸಿದರು. ಇಂದಿನ ಯುಗದಲ್ಲಿ ಈ ಶಿಬಿರ ತುಂಬಾ ಅಗತ್ಯವಾಗಿದೆ. ಸುರಕ್ಷತೆ ಮಾತ್ರವಲ್ಲ, ಆತ್ಮರಕ್ಷಣೆಯೂ ಮುಖ್ಯ. ಈ ಶಿಬಿರವು ಲಾಠಿ ಮತ್ತು ಆಯುಧಗಳನ್ನು ಬಳಸುವ ಕಲೆಯನ್ನು ಕಲಿಸುತ್ತದೆ ಎಂದರು.
ಒಟ್ಟಾರೆಯಾಗಿ, ಬೆಳಗಾವಿಯಲ್ಲಿ ಆಯೋಜಿಸಲಾದ ಈ ಶಿವಯುಗದ ಸಮರ ಕಲೆಗಳು ಮತ್ತು ಸ್ವರಕ್ಷಣೆ ತರಬೇತಿ ಶಿಬಿರವು ಹೊಸ ಪೀಳಿಗೆಗೆ ನಮ್ಮ ಭವ್ಯ ಇತಿಹಾಸ ಮತ್ತು ಸಾಂಪ್ರದಾಯಿಕ ಸಮರ ಕಲೆಗಳನ್ನು ಪರಿಚಯಿಸುತ್ತಿದೆ. ಅಲ್ಲದೇ, ಆತ್ಮವಿಶ್ವಾಸದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಗಟ್ಟಿಗೊಳಿಸುತ್ತಿದೆ. ಈ ಶಿಬಿರವು ಮಂಗಳವಾರ ಮುಕ್ತಾಯಗೊಳ್ಳಲಿದೆ.
Laxmi News 24×7