ವಿಜಯಪುರ : ನನಗೆ SIT ಮೇಲೆ ನಂಬಿಕೆ ಇಲ್ಲ ಎಷ್ಟು ಪಾರದರ್ಶಕತೆಯಿಂದ ನಡಿಯುತ್ತೋ ನನಗೆ ಸಂಶಯವಿದೆ ಎಂದು ಬಿಜೆಪಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿ ರಾಜ್ಯಉಪಾಧ್ಯಕ್ಷ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.
ಹೌದು ಇಂದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ ನನಗೆ SIT ಮೇಲೆ ಸಂಶಯವಿದೆ ಯಾಕಂದ್ರೆ ಅಲ್ಲಿರುವಂತಹ ಒಬ್ಬ ಅಧಿಕಾರಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾನೆ ಈ ಹಿಂದೆ ಡ್ರಗ್ಸ್ ಮಾಫಿಯಾ ವಿಚಾರಣೆ ಮಾಡಿದ್ರು ಅದನ್ನು ಮುಚ್ಚಿ ಹಾಕಿದ್ರು ಅದು ಫೇಲಾಯಿತು , ಯುವರಾಜ್ ನನ್ನ ಹಿಡಿದ್ರು ಅದು.ಸಹ ಮುಚ್ಚಿ ಹಾಕಲಾಗಿದೆ , ಹೀಗಾಗಿ ನನಗೆ ಅನಿಸುತ್ತದೆ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿಯ ಉನ್ನತ ನಾಯಕನ ಮಗ ಮತ್ತು ಕಾಂಗ್ರೆಸ್ ಉನ್ನತ ನಾಯಕನ ಮಗ ವ್ಯವಸ್ಥಿತವಾಗಿ ಜಾರಕಿಹೊಳಿ ಅವರನ್ನ ಮುಗಿಸಬೇಕು ಅಂತಾ ಕುತಂತ್ರ ನಡೆದಿದೆ ಆದ್ದರಿಂದ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.