ಮುಜಪ್ಫರ್ನಗರ: ಸಿಎಎ ವಿರೋಧಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ಸಾರ್ವಜಕ ಅಸ್ತಿ ನಾಶ ಮಾಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಾಲ್ವರು ಸದಸ್ಯರಿಂದ ನಷ್ಟ ಭರ್ತಿ ಮಾಡಲು ಉತ್ತರಪ್ರದೇಶ ಸರಕಾರ ಕ್ರಮ ಕೈಗೊಂಡಿದೆ.
ಡಿಸೆಂಬರ್ ತಿಂಗಳಲ್ಲಿ ಉತ್ತರಪ್ರದೇಶದ ಕೈರಾನದಲ್ಲಿ ಸಿಎಎ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಇದರಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟಗೊಂಡಿತ್ತು. ಇದರ ಸಂಪೂರ್ಣ ಮಾಹಿತಿ ಕಲೆಹಾಕಿದ ಪೊಲೀಸರು, ಈಗ ದೊಂಬಿ ಪ್ರಚೋದಕರಿಂದ ನಷ್ಟ ಭರ್ತಿಗೆ ಕ್ರಮ ಕೈಗೊಂಡಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಗಳಾದ ಪಿಎಫ್ಐನ ಡಾ.ಗುಫ್ರಾನ್, ಡಾ.ಮುನಾವರ್, ಅಹ್ಮದ್ ಮತ್ತು ಕರಿ ಅಬ್ದುಲ್ ವಾಜಿದ್ ಈಗ ತಲೆಮರೆಸಿಕೊಂಡಿದ್ದಾರೆ.
ಇವರ ವಿರುದ್ಧ ಸ್ಥಳೀಯ ನ್ಯಾಯಾಲಯವು ಐಪಿಸಿ ಸೆಕ್ಷನ್ 82ರ ಅಡಿಯಲ್ಲಿನೋಟಿಸ್ ಹೊರಡಿಸಿದೆ.