ಮೂಡಲಗಿ: ಬಡ ಚಹಾಪುಡಿ ವ್ಯಾಪಾರಿಯೊಬ್ಬ ಮೂಡಲಗಿಯಿಂದ ಗೋಕಾಕಕ್ಕೆ ದ್ವಿಚಕ್ರ ವಾಹನದ ಮೇಲೆ ಹೋಗುವಾಗ ಹಿಂದಿನಿಂದ ಬಂದ ಟಿಪ್ಪರ ಲಾರಿ (MH-10) ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಆತನ ರುಂಡವೇ ಬೇರ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಕಲ್ಲೋಳ್ಳಿ ಬಳಿ ನಡೆದಿದೆ.
ಶಕೀಲ ಜಮಾದಾರ (೫೦) ಮೃತಪಟ್ಟ ದುರ್ದೈವಿ. ಘಟನೆ ನಡೆದ ಬೆನ್ನಲ್ಲೇ ಸ್ಥಳೀಯರು ಟಿಪ್ಪರ್ ಅನ್ನೋ ಬೆನ್ನಟ್ಟಿದ್ದಾರೆ. ಕೂಡಲೇ ಲಾರಿ ಚಾಲಕ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಮೂಲಗಳು ಜನಜೀವಾಳ ಕ್ಕೆ ತಿಳಿಸಿವೆ.
ಘಟಪ್ರಭಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆಯುತ್ತಿದ್ದಾರೆ.