Home / ಅಂತರಾಷ್ಟ್ರೀಯ / ಅತ್ಯಾಚಾರ ಆರೋಪಿಗೆ ‘ಕೈ’ ಟಿಕೆಟ್: ಪ್ರಶ್ನಿಸಿದಕ್ಕೆ ಕಾರ್ಯಕರ್ತೆ ಮೇಲೆ ಸ್ವಪಕ್ಷೀಯರಿಂದ ಹಲ್ಲೆ

ಅತ್ಯಾಚಾರ ಆರೋಪಿಗೆ ‘ಕೈ’ ಟಿಕೆಟ್: ಪ್ರಶ್ನಿಸಿದಕ್ಕೆ ಕಾರ್ಯಕರ್ತೆ ಮೇಲೆ ಸ್ವಪಕ್ಷೀಯರಿಂದ ಹಲ್ಲೆ

Spread the love

ಲಕ್ನೋ: ಅತ್ಯಾಚಾರ ಆರೋಪಿಗೆ ಉಪಚುನಾವಣೆಯ ಟಿಕೆಟ್​ ಏಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದಕ್ಕೆ ಸ್ವಪಕ್ಷೀಯರಿಂದಲೇ ಕಾಂಗ್ರೆಸ್​ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆದಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಕಾಂಗ್ರೆಸ್​ ಕಾರ್ಯಕರ್ತೆ ತಾರಾ ಯಾದವ್​ ಮೇಲೆ ಆಕೆಯ ಪಕ್ಷದವರೇ ನಿನ್ನೆ ನಡೆದ ಮೀಟಿಂಗ್​ ವೇಳೆ ಹಲ್ಲೆ ನಡೆಸಿದ್ದಾರೆ.
 ಅತ್ಯಾಚಾರದ ಆರೋಪ ಹೊತ್ತಿರುವ ಮುಕುಂದ್​ ಭಾಸ್ಕರ್​ಗೆ ಟಿಕೆಟ್​ ನೀಡುವುದನ್ನು ಪ್ರಶ್ನಿಸಿದಕ್ಕೆ ತಾರಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಘಟನೆಯ ವಿಡಿಯೋ ಬೆಳಕಿಗೆ ಬಂದಿದ್ದು ಈ ಕುರಿತು ಸೂಕ್ತ ಕ್ರಮ ಜರುಗಿಸಲು ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಆಗ್ರಹಿಸುತ್ತೇನೆ ಎಂದು ತಾರಾ ಹೇಳಿದ್ದಾರೆ.

ಒಂದು ಕಡೆ ನಮ್ಮ ಪಕ್ಷದ ನಾಯಕರು ಹತ್ರಾಸ್​ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇಲ್ಲಿ ಅತ್ಯಾಚಾರದ ಆರೋಪ ಹೊತ್ತಿರುವವನಿಗೆ ಪಕ್ಷವು ಉಪಚುನಾವಣೆಯ ಟಿಕೆಟ್​ ನೀಡಲು ಮುಂದಾಗಿದೆ. ಇದು ತಪ್ಪು ನಿರ್ಧಾರ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ, ಇದನ್ನು ಪ್ರಶ್ನಿಸಿದೆ ಎಂದು ತಾರಾ ಯಾದವ್​ ಹೇಳಿದ್ದಾರೆ.

Congress’ Tara Yadav manhandled by party workers at an event in Deoria.(10.10)

She says,”I was thrashed by party workers when I questioned party’s decision to give a ticket to a rapist, Mukund Bhaskar for upcoming by-polls. Now, I’m waiting for Priyanka Gandhi ji to take action” pic.twitter.com/MYYp8k1GLX

– ANI UP (@ANINewsUP)


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ