Breaking News

ಶಾಲೆ ಆರಂಭ ಮಾಡದಿದ್ದರೆ ಮಕ್ಕಳು ಬೇರೆ ಚಟ ಕಲಿತು ಬಿಡುತ್ತಾರೆ…..

Spread the love

ಕೊಪ್ಪಳ: ಶಾಲೆ ಆರಂಭ ಮಾಡಬೇಕು. ಆರಂಭ ಮಾಡದಿದ್ದರೆ ಮಕ್ಕಳು ಬೇರೆ ಚಟ ಕಲಿತು ಬಿಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇನ್ನೂ ಎರಡು ತಿಂಗಳು ಶಾಲೆ ಆರಂಭ ಮಾಡುವುದು ಬೇಡ. ನಂತರ ಶಾಲೆ ಪ್ರಾರಂಭ ಮಾಡಬೇಕು. ಎಲ್ಲ ಸಿದ್ಧತೆ ಮಾಡಿಕೊಂಡು ಶಾಲೆ ಆರಂಭ ಮಾಡಬೇಕು. ಎರಡು ಪಾಳಿಯಲ್ಲಿ ಶಾಲೆ ಆರಂಭ ಮಾಡಿ, ಇರುವ ವಿದ್ಯಾರ್ಥಿಗಳನ್ನೇ ದೂರ ದೂರ ಕೂರಿಸಬೇಕು. ಅಲ್ಲದೇ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

 

ಮಕ್ಕಳು ಒಂದು ವರ್ಷ ಶಾಲೆಗೆ ಹೋಗದಿದ್ದರೆ ಬೇರೆ ಚಟ ಕಲಿತು ಬಿಡುತ್ತಾರೆ. ಹೀಗಾಗಿ ಶಾಲೆ ಆರಂಭ ಮಾಡಬೇಕು. ನಮ್ಮ ಶಾಲೆ ಅರ್ಧಕ್ಕೆ ನಿಂತಿತ್ತು. ಆಗ ಓತಿಕೇತ ಹೊಡೆಯಲು ಹೋಗುತ್ತಿದ್ದೆವು. ಹೀಗಾಗಿ ನನ್ನ ಶಾಲೆ ಅರ್ಧಕ್ಕೆ ನಿಂತಿತು. ಆದ್ದರಿಂದ ತಡವಾಗಿ ಶಾಲೆಯನ್ನು ಪ್ರಾರಂಭಿಸುವುದು ಉತ್ತಮ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮಲ್ಲಿ ಆನ್‍ಲೈನ್ ಶಿಕ್ಷಣ ಅಷ್ಟು ಯಶಸ್ವಿಯಾಗಿಲ್ಲ. ಕೊರೊನಾ ಮಕ್ಕಳಿಂದ ಹರಡುವುದಿಲ್ಲ. ವಿದೇಶದಿಂದ ವಿಮಾನದ ಮೂಲಕ ಬಂದವರು ಸೋಂಕು ತಂದರು. ಈ ಕೊರೊನಾ ಒಬ್ಬರಿಂದ ಒಬ್ಬರಿಗೆ ಹರಡುತ್ತೆ. ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಸಿದ್ದರಾಮಯ್ಯ ಸೂಚಿಸಿದರು.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ