ಬೆಂಗಳೂರು: ನವೆಂಬರ್ 3ರಂದು ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಪರ ಬೈಕ್ ಱಲಿ ನಡೆಸಿ ಶಾಸಕ ಜಮೀರ್ ಅಹ್ಮದ್ ಖಾನ್ ಮತಯಾಚನೆ ಮಾಡಿದರು.
ಬುಲೆಟ್ ಬೈಕ್ ಮೇಲೆ ಬಿಂದಾಸ್ ಆಗಿ ಏರಿಯಾದಲ್ಲೆಲ್ಲಾ ಱಲಿ ಹೊರಟ ಶಾಸಕ ಬಳಿಕ ಕಾರ್ಯಕರ್ತರಿಗೆ ಹಾಲು ಸಹ ವಿತರಿಸಿದರು. ಕ್ಯಾಂಟೀನ್ ಒಂದರಲ್ಲಿ ಖುದ್ದು ತಾವೇ ಕಾರ್ಯಕರ್ತರಿಗೆ ಬಾದಾಮಿ ಹಾಲು ವಿತರಿಸಿದರು.