ಕೋರೊನಾ ವೈರಸ್ ಹರಡದಂತೆ ಕಾರ್ಯನಿರ್ವಹಿಸುತ್ತಿರುವ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಆಶಾಕಾರ್ಯಕರ್ತರು ಹಾಗೂ ಪುರಸಭೆ ಸಿಬ್ಬಂದಿಗಳಿಗೆ ಪಟ್ಟಣದ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗದ ಪುರಸಭೆ ಸದಸ್ಯ ಶಿವಾನಂದ ಚಂಡಕಿ, ಶ್ರೀ ಸಾಯಿ ಸೌಹರ್ದ ಬ್ಯಾಂಕಿನ ಅಧ್ಯಕ್ಷ ಮರೆಪ್ಪ ಮರೆಪ್ಪಗೋಳ ಮತ್ತು ಹಳ್ಳೂರ ಪಿಕೆಪಿಎಸ್ ಸದಸ್ಯ ಹನುಮಂತ ತೇರದಾಳ ಅವರು ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹನದ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಆನಂದ ಟಪಾಲದಾರ, ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಕುಮಾರ ಲೊಕನ್ನವರ, ಮಲ್ಲಪ್ಪ ಛಬ್ಬಿ, ಬಸಪ್ಪ ಹಡಪದ, ಬಸಪ್ಪ ಸಂತಿ, ಸಿದ್ದಪ್ಪ ಮಗದುಮ್, ಸಿದ್ದು ದುರುದುಂಡಿ, ರಾಘು ಕೊಕಟನೂರ, ಚೆನ್ನಪ್ಪ ಅಥಣಿ, ರಮೇಶ ಪಾಟೀಲ, ಭಗವಂತ ಉಪ್ಪಾರ, ಸುಭಾಸ್ ಗೊಡ್ಯಾಗೋಳ, ಭೀಮಶಿ ಸೋರಗಾಂವಿ ಹಾಗೂ ಜನಸೇವಾ ಗೆಳೆಯರ ಬಳಗ, ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
Check Also
ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್ಯಾಂಕ್
Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …