ಗೋಕಾಕ:ದೇಶದ ಜನಜೀವನ ಕೋವಿಡ್ 19 ವೈರಸ್ ನಿಂದ ಜನಸಾಮಾನ್ಯರ ಬದುಕು ವಿಷಾದನೀಯ ಹಾಗೂ ಲಾಕ್ ಡೌನ್ ಬೆನ್ನಲ್ಲೇ ಸಭೆ ಸಭಾರಂಭಗಳು, ಮದುವೆಗಳು,ಜಾತ್ರೆಗಳು ಹಾಗೂ ಎಲ್ಲಾ ಸಾರ್ವಜನಿಕ ಮತ್ತು ವಯಕ್ತಿಕ ಮನರಂಜನೆ ಕಾರ್ಯಕ್ರಮಗಳಿಗೆ ಸಂಪೂರ್ಣ ನಿಷೇಧವಿದ್ದು ಎಲ್ಲಾ ಬ್ಯಾಂಡ್ ಬಾಜಾ ಭಜಂತ್ರಿ ಕಲಾವಿದರುಗಳಿಗೆ ಜೀವನ ನಿರ್ವಹಣೆ ಕಷ್ಟದಲ್ಲಿರುತ್ತದೆ.
ಈ ಮೂಲಕ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ಸುಮಾರು 24 ರಿಂದ 25 ಬ್ಯಾಂಡ್ ಮಾಲೀಕರು ಮತ್ತು ಕಲಾವಿದರು ಸುಮಾರು 500ಕ್ಕೂ ಅಧಿಕ ಕುಟುಂಬಗಳು ಈ ಒಂದೇ ವೃತ್ತಿಯನ್ನು ನಂಬಿಯೇ ಜೀವನ ಸಾಗುಸುತ್ತಿವೆ.
ಮಾರ್ಚ್ ನಿಂದ ಮೇ ವರೆಗೂ ಕಾರ್ಯಕ್ರಮದ ಹಂಗಾಮವಿರುತ್ತದೆ ಆದರೆ ಕೋವಿಡ್ ನಿಂದ ಸರಕಾರ ನಿಷೇಧ ಏರಿದೆ ಈ ಎಲ್ಲಾ ಕಲಾವಿದರ ಜನಜೀವನ ತುಂಬಾ ಕಷ್ಟಕರವಾಗಿದ್ದು ಸರ್ಕಾರ ಹಸ್ತ ಚಾಚಿ ಸಹಾಯಧನವನ್ನು ನೀಡಬೇಕು ಎಂದು ತಹಸೀಲ್ದಾರ್ ಗೋಕಾಕ, ರಮೇಶ.ಲ. ಜಾರಕಿಹೊಳಿ ಜಲಸಂಪನ್ಮೂಲ ಸಚಿವ, ಸತೀಶ.ಲ. ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರು
ಬಾಲಚಂದ್ರ. ಲ. ಜಾರಕಿಹೊಳಿ ಕೆ ಎಮ್ ಎಫ್ ಅಧ್ಯಕ್ಷರುಗಳ ಮೂಲಕ ಮುಖ್ಯಮಂತ್ರಿ ಗಳಿಗೆ ಮತ್ತು ಸಚಿವರಿಗೆ ಮನವಿ ನೀಡಲಾಗಿದೆ