ಬೆಳಗಾವಿ – ಕಳೆದ 4 ದಿನಗಳಿಂದ ಪ್ರವಾಹದಿಂದಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ನಂ 4 ಈಗ ಸಂಚಾರಕ್ಕೆ ಮುಕ್ತವಾಗಿದೆ.
ಬೆಳಗಾವಿ -ಕೊಲ್ಲಾಪುರ ಮಧ್ಯೆ ಸಂಕೇಶ್ವರ ಬಳಿ ವೇದಗಂಗಾ ನದಿ ಉಕ್ಕಿ ಹರಿದು ಸಂಚಾರ ಬಂದ್ ಆಗಿತ್ತು, ಅಲ್ಲದೆ ಮಧ್ಯೆ ಮಧ್ಯೆ ಕೆಲವು ಹಳ್ಳಗಳೂ ರಸ್ತೆಯ ಮೇಲೆ ಹರಿದು ಸಂಚಾರ ತಡೆದಿದ್ದವು.
ಇಂದು ಮಧ್ಯಹ್ನ 12 ಗಂಟೆ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ ಮೇಲಿನ ನೀರು ಖಾಲಿಯಾಗಿದ್ದು, ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.