ಬೆಂಗಳೂರು: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಇಂದು ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದರು. ಜೊಲ್ಲೆ ಪ್ರತಿಭಟನೆ ನೀಡಬೇಕೆಂದು ಬೀದಿಯಲ್ಲಿ ನಿಂತು ಒತ್ತಾಯ ಹಾಕಿದ್ರು. ಆ ಬಳಿಕ ಪ್ರತಿಭಟನಾನಿರತ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಘಟನೆ ಏನು..?
ಅಂಗನವಾಡಿಗಳಲ್ಲಿ ಉಚಿತವಾಗಿ ಮೊಟ್ಟೆ ಹಾಗೂ ಆಹಾರ ಪದಾರ್ಥಗಳನ್ನ ನೀಡಲಾಗುತ್ತದೆ. ಅದು ಮಕ್ಕಳು ಹಾಗೂ ಗರ್ಭಿಣಿಯರು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ. ಆದ್ರೆ ಈ ಆಹಾರವೂ ಸಚಿವರ ಮಡಿಲಿಗೆ ಸೇರ್ತಾ ಇದೆ ಅನ್ನೋದೆ ದುರದೃಷ್ಟಕರ.
ಖಾಸಗಿ ಚಾನೆಲ್ ನ್ಯೂಸ್ ಫಸ್ಟ್ ಈ ಸಂಬಂಧ ಸ್ಟಿಂಗ್ ಆಪರೇಷನ್ ಮಾಡಿತ್ತು. ಅದರಲ್ಲಿ ಸಚಿವೆಯ ಬಣ್ಣ ಬಯಲಾಗಿದೆ. ಮೊಟ್ಟೆ ಹಂಚಿಕೆಯಲ್ಲಿ ಸಚಿವೆ ಕಿಕ್ ಬ್ಯಾಕ್ ಪಡೆಯುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಯುವ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿದೆ.
ಶಶಿಕಲಾ ಜೊಲ್ಲೆ ವಿರುದ್ಧ ಬೀದಿಗಿಳಿದು ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಸಚಿವೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದೇ ವೇಳೆ ಪೊಲೀಸರು ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ.
ಜವಬ್ದಾರಿ ಇರುವ ಸಚಿವರೇ ಹೀಗೆ ಬಡವರಿಗೆ ಸಿಗಬೇಕಾದ ಪೌಷ್ಟಿಕಾಂಶದಲ್ಲಿ ಹಣ ಗಳಿಸಲು ಹೊರಟರೇ ಹೇಗೆ..? ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.