ಬೆಂಗಳೂರು: ನಾವು ಯಡಿಯೂರಪ್ಪ ಇಳಿಸೋಕೆ ಪ್ರಯತ್ನ ಮಾಡ್ತಿಲ್ಲ. ನಮ್ಮ ಸಮುದಾಯದಲ್ಲೂ ಮೂರು ಹುಲಿಗಳಿವೆ. ಆ . ಈ ಮೆಸೇಜ್ ರಾಷ್ಟ್ರೀಯ ನಾಯಕರಿಗೆ ತಲುಪಬೇಕು ಎಂದು ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ ಶ್ರೀಗಳು ರಾಜ್ಯ ರಾಜಕರಣದ ಬಗ್ಗೆ ಮಾತನಾಡಿದ್ದಾರೆ.
ಟಿವಿ5 ಜೊತೆ ಮಾತನಾಡಿದ ಅವರು, ನಾವು ಯಡಿಯೂರಪ್ಪನವರ ವಿರೋಧಿಗಳಲ್ಲ. ಅವರು ಇಲ್ಲಿಯವರೆಗೆ ಎಲ್ಲವನ್ನೂ ಆಳಿದ್ದಾರೆ. ಹಾಗಾಗಿ ನಮ್ಮವರಿಗೆ ಕೊಡಿ ಎನ್ನುವುದಷ್ಟೇ ನಮ್ಮ ವಾದ. ನಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಬೇಕು. ಯಾರು ಸಚ್ಛಾರಿತ್ರವಂತರಿದ್ದಾರೆ ಅವರಿಗೆ ಕೊಡಲಿ. ಅವರು ಯಾರು ಅನ್ನೋದು ಮೋದಿಯವರಿಗೆ ಗೊತ್ತಿದೆ ಎಂದರು.
ಇನ್ನು ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳರಿಗೆ ಸಿಎಂ ಸ್ಥಾನ ಕೊಡಲಿ. ಬಲವಂತವಾಗಿ ಯಡಿಯೂರಪ್ಪ ಇಳಿಸಿ ಅಂತ ಹೇಳಲ್ಲ. ಈಗ ಅವರೇ ಇಳಿಯೋಕೆ ಹೊರಟಿದ್ದಾರೆ. ಹಾಗಾಗಿ ನಾವು ಬೇಡಿಕೆ ಇಡ್ತಿದ್ದೇವೆ ಎಂದರು.