ಗೋಕಾಕ: ರಾಜ್ಯ ರಾಜಕಾರಣದಲ್ಲಿ ಪ್ರತಿದಿನ ಯಾವುದಾದರೂ ಒಂದು ಸುದ್ದಿಯ ಮೂಲಕ ಜಾರಕಿಹೊಳಿ ಬ್ರದರ್ ಸ ಚರ್ಚೆ ಯಲಿರುತ್ತಾರೆ.
ಇನ್ನು ಇದೊಂದು ಹೊಸ ಸುದ್ದಿ ಸಂಚಲನ ಮೂಡಿಸುತ್ತಿದೆ ,ಇನ್ನೇನು ಡಿಸೆಂಬರ್ ತಿಂಗಳಲ್ಲಿ ಬರುವ ವಿಧಾನ ಪರಿಷತ್ ಚುನಾವಣೆಗೆ. ಲ ಖನ್ ಜಾರಕಿಹೊಳಿ ಅವರನ್ನ ನೇಮಿಸುವ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯ ವಾಗಿದೆ.
ಈಗಾಗಲೇ ಮಹಾಂತೇಶ್ ಕವಟಗಿಮಠ ಹಾಗೂ ವಿವೇಕ್ ರಾವ ಪಾಟೀಲ ವಿಧಾನ ಪರಿಷತ್ ಸದಸ್ಯರು ಇದ್ದಾರೆ ಆದ್ರೆ ಇನ್ನು ಡಿಸೆಂಬರ್ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಲಖನ ಜಾರಕಿಹೊಳಿ ಅವರಿಗೆ ವಿಧಾನ ಪರಿಷತ್ ಸದಸ್ಯ ಮಾಡ್ತಾರೆ ರಮೇಶ್ ಜಾರಕಿಹೊಳಿ ಎಂಬ ಸುದ್ದಿ ಇವಾಗ ಚರ್ಚೆಗೆ ಕಾರಣ ವಾಗಿದೆ.
ಲೋಕಸಭಾ ಉಪಚುನಾವಣೆ ಯಲ್ಲಿ ಎಲ್ಲ ಬಿಜೆಪಿ ಪ್ರಮುಖರು ಲಖನ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದ್ದು ಕೂಡ ಇದಕ್ಕೆ ಕಾರಣ ಎಂಬುದು ಇತ್ತೀಚಿಗೆ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಗ್ರಾಸ ವಾಗಿದೆ.
ಇನ್ನು ಮೊನ್ನೆ ತಾನೇ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರಮೇಶ್ ಜಾರಕಿಹೊಳಿ ನಮ್ಮ ಕುಟುಂಬದಲ್ಲಿ ಇನ್ನು ತುಂಬಾ ಹುಳಿಗಳಿವೆ ಎಂಬ ಮಾತು ಬಹುಶಃ ಸತ್ಯಕ್ಕೆ ಬಹು ಹತ್ತಿರವಾಗಿದ್ದು. ಮುಂಬರುವ ವಿಧಾನ ಪರಿಷತ್ ಚುನಾವಣಯಲ್ಲಿ ಏನಾಗುತ್ತೋ ಅನ್ನೋದನ್ನ ಕುತೂಹಲದ ಸಂಗತಿ ಇವಾಗ ಎಲ್ಲರಲ್ಲೂ ಮನೆ ಮಾಡಿದೆ…