ಗದಗ : ಸದ್ಯ ಬಿಜೆಪಿ ಒಡೆದ ಮನೆಯಂತಾಗಿದೆ. ಮೊದಲಿದ್ದ ಬೆಂಬಲ, ಪ್ರೀತಿ, ವಿಶ್ವಾಸ ಅಷ್ಟಾಗೇನು ಕಾಣ್ತಾ ಇಲ್ಲ. ಇನ್ನೆರಡು ವರ್ಷವಷ್ಟೆ ಎಲೆಕ್ಷನ್ ಗೆ ದಿನಗಳು ಬಾಕಿ ಉಳಿದಿರೋದು. ಈ ನಡುವೆ ಬಿಜೆಪಿಯ ಒಳಮುನಿಸ್ಸನ್ನ ವಿಪಕ್ಷಗಳು ಬಂಡವಾಳವನ್ನಾಗಿಸಿಕೊಳ್ಳುತ್ತಿವೆ. ಜೆಡಿಎಸ್, ಕಾಂಗ್ರೆಸ್ ನಲ್ಲಿ ಸಿಎಂ ಕ್ರೇಜ್ ಶುರುವಾಗಿದೆ. ಅದರಲ್ಲೂ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನೋ ಕೂಗು ಆಗಾಗ ಕೇಳುತ್ತಲೆ ಇರುತ್ತೆ. ಆದ್ರೆ ಈ ಬಾರಿ ಅದು ಎತ್ತುಗಳ ಮೇಲೂ ರಾರಾಜಿಸುತ್ತಿದೆ.
ಗದಗ ತಾಲೂಕಿನ ತಿಮ್ಮಾಪುರದಲ್ಲಿ ಕಾರಹುಣ್ಣಿಮೆ ನೆಡೆದಿದೆ. ಈ ಹಿನ್ನೆಲೆ ಸಿದ್ದರಾಮಯ್ಯ ಅಭಿಮಾನಿಗಳು ಎತ್ತಿನ ಮೇಲೆ ಸಿಎಂ ಸಿದ್ದರಾಮಯ್ಯ ಎಂದು ಬರೆದು ಎತ್ತನ್ನ ಅಲಂಕಾರ ಮಾಡಿದ್ದಾರೆ. ಕಾರ ಹುಣ್ಣಿಮೆಯಲ್ಲಿ ಎತ್ತುಗಳನ್ನ ಸಿಂಗರಿಸಿ ಮೆರವಣಿಗೆ ಮಾಡಲಾಗುತ್ತೆ. ಹಾಗೇ ಮೆರವಣಿಗೆ ಮಾಡಲು ರೆಡಿ ಮಾಡಿದ ಎತ್ತಿನ ಮೇಲೆ ಈ ರೀತಿ ಬರೆಯಲಾಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಎಂದು ಬರೆದ ಎತ್ತಿನ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.