ಬೆಳಗಾವಿ : ಪೊಲೀಸರಿಂದಲೇ ಚಿನ್ನ ಕಳ್ಳತನ ಪ್ರಕರಣ ತನಿಖೆ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೆಲ ಹಿರಿಯ ಪೊಲೀಸ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.
ಯಮಕನಮರಡಿ ಠಾಣೆ ವ್ಯಾಪ್ತಿಯಲ್ಲಿ ನಡೆದ 2.5 ಕೋಟಿ ಬೆಲೆ ಬಾಳುವ ಐದು ಕೆ.ಜಿ. ಚಿನ್ನ ಪ್ರಕರಣದಲ್ಲಿ ಅದರ ಸಿಐಡಿ ಅಧಿಕಾರಿಗಳು ಕಿರಣ್ ವೀರನಗೌಡರ್ ಎಂಬ ಡಿಲ್ ನ ಮಧ್ಯವರ್ತಿ ವ್ಯಕ್ತಿಯ ಜನ್ಮ ಜಾಲಾಡಿದ್ದಾರೆ.
ಕಿರಣ ವೀರನಗೌಡರ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದು, ಅಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದನು. ಬಳಿಕ ಮಧ್ಯ ಪ್ರವೇಶ ಮಾಡಿ, ಡೀಲ್ ಕುದಿರಿಸುವುದೇ ಇತನ ವೃತ್ತಿಯಾಗಿತ್ತು.
ಹಿರಿಯ ಪೊಲೀಸ ಅಧಿಕಾರಿಗಳಿಗೆ ನಡುಕ : ಬೆಳಗಾವಿ ಜಿಲ್ಲೆಯಲ್ಲಿ ಚಿನ್ನ ಕಳ್ಳತನ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಹೆಸರು ಕೇಳಿ ಬರುತ್ತಿದ್ದು, ಸಿಐಡಿ ತನಿಖೆ ಬಳಿಕ ಹೆಸರು ತಿಳಿಯಬೇಕಾಗಿದೆ.
ಡೀಲ್ ಕಿಂಗ್ ಪೀನ್ ಕಿರಣ್ ವೀರನಗೌಡ ಕೆಲ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ಹಿಂದೆ ಹಲವು ಅಧಿಕಗಳೊಂದಿಗೆ ಸೇರಿ ಡೀಲ್ ಮುಗಿಸಿ, ಅಧಿಕಾರಿಗಳ ಜೇಬು ತುಂಬಿಸುದ ಕೀರ್ತಿ ಇತನಿಗೆ ಸಲ್ಲುತ್ತದೆ.
ಚಿನ್ನ ಕಳ್ಳತನ ಪ್ರಕರಣ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಒಂದೊಂದೆ ಸತ್ಯ ಬಯಲಾಗುತ್ತಿದೆ. ಜತೆಗೆ ಕಿಂಗ್ ಪೀನ್ ಡೀಲರ್ ಕಿರಣ್ ದೊಂದಿಗೆ ಸೇರಿದ ಡೀಲ್ ಗಳು ಬಹಿರಂಗವಾಗಲಿವೇ ? ಎಂಬ ಭಯ ಹಿರಿಯ ಅಧಿಕಾರಿಗಳನ್ನು ಕಾಡತೊಡಗಿದೆ.