Breaking News
Home / ರಾಜ್ಯ / ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಿಸದೇ ಹೋದಲ್ಲಿ ಅನಾಹುತ ಕಾದಿದೆ: ಮಾಜಿ ಸಿಎಂ ಹೆಚ್​ಡಿಕೆ

ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಿಸದೇ ಹೋದಲ್ಲಿ ಅನಾಹುತ ಕಾದಿದೆ: ಮಾಜಿ ಸಿಎಂ ಹೆಚ್​ಡಿಕೆ

Spread the love

ರಾಜ್ಯದಲ್ಲಿ ಸದ್ಯ ಲಾಕ್​ಡೌನ್​ ವಿಸ್ತರಣೆಯದ್ದೇ ಚರ್ಚೆ. ಟ್ವಿಟರ್​ನಲ್ಲಿ ಸದಾ ಲಾಕ್​ಡೌನ್​ ವಿಸ್ತರಣೆಯ ಆಗ್ರಹ ಮಾಡುತ್ತಿದ್ದ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಇದೀಗ ಮತ್ತೆ ತಮ್ಮ ಹೇಳಿಕೆಯನ್ನ ಪುನರುಚ್ಛರಿಸಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಲಾಕ್​ಡೌನ್​ ವಿಸ್ತರಣೆ ಮಾಡದೇ ಹೋದಲ್ಲಿ ದೊಡ್ಡ ಅನಾಹುತವೇ ಕಾದಿದೆ ಎಂದು ಹೇಳಿದ್ರು.

ರಾಜ್ಯದ ಸದ್ಯದ ಪರಿಸ್ಥಿತಿಯನ್ನ ನೋಡ್ತಿದ್ರೆ ಲಾಕ್​ಡೌನ್​ ವಿಸ್ತರಣೆ ಮಾಡದೇ ಬೇರೆ ವಿಧಿ ಇಲ್ಲ ಎಂದೆನಿಸುತ್ತಿದೆ. ಹೀಗಾಗಿ ಜನರ ಜೀವದ ಜೊತೆ ಆಟವಾಡಬೇಡಿ. ಕನಿಷ್ಟ 1 ತಿಂಗಳುಗಳ ಕಾಲ ಲಾಕ್​ಡೌನ್​​​ನ್ನು ವಿಸ್ತರಣೆ ಮಾಡಿ.

ಲಾಕ್​ಡೌನ್​​ ವಿಸ್ತರಣೆಯ ಜೊತೆಯಲ್ಲಿ ಬಡ ಜನತೆಯ ಮೇಲೆ ಗಮನ ಹರಿಸಿ. ಅವರಿಗೆ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿ. ಮನೆ ಮನೆಗೆ ದಿನಸಿ ವಸ್ತುಗಳನ್ನ ತಲುಪಿಸುವ ಕೆಲಸ ಮಾಡಿ. ಜನರ ಊಟಕ್ಕೆ ಸರಿಯಾಗಿ ದಾರಿ ಮಾಡಿಕೊಟ್ಟು ಲಾಕ್​ಡೌನ್​ ವಿಸ್ತರಣೆ ಮಾಡಿ ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಮೊಸಳೆಗಳಿವೆ ಎಚ್ಚರಿಕೆ!

Spread the love ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮನುಷ್ಯ ಮತ್ತು ಮೊಸಳೆಗಳ ಸಂಘರ್ಷ ಬೇಸಿಗೆಯಲ್ಲಿ ಅಧಿಕ. ಕೃಷ್ಣಾ ನದಿಯಲ್ಲಿ ನೀರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ