Breaking News
Home / ರಾಜ್ಯ / ಕೊಡಗು: ಲಾಕ್​ಡೌನ್​ನಿಂದ ಊಟವಿಲ್ಲದೆ ಉಪವಾಸವನ್ನೇ ರೂಢಿಸಿಕೊಂಡ ಕುಟುಂಬ!

ಕೊಡಗು: ಲಾಕ್​ಡೌನ್​ನಿಂದ ಊಟವಿಲ್ಲದೆ ಉಪವಾಸವನ್ನೇ ರೂಢಿಸಿಕೊಂಡ ಕುಟುಂಬ!

Spread the love

ಕೊಡಗು : ದೇಶದಲ್ಲಿ ಕೋವಿಡ್ ಮಹಾಮಾರಿ ವ್ಯಾಪಿಸುತ್ತಿದ್ದಂತೆ ಇನ್ನಷ್ಟು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ 2020 ರಲ್ಲಿ ಇಡೀ ದೇಶವನ್ನೇ ಸಂಪೂರ್ಣ ಲಾಕ್​ಡೌನ್ ಮಾಡಿತ್ತು. ಆ ಸಂದರ್ಭ ಎಷ್ಟೋ ಲಕ್ಷಾಂತರ ಕುಟುಂಬಗಳು ಅನುಭವಿಸಿದ ನೋವು, ಸಂಕಷ್ಟ ಅಷ್ಟಿಷ್ಟಲ್ಲಾ. ಇದರಿಂದ ಕೊಡಗು ಜಿಲ್ಲೆ ಏನು ಹೊರತ್ತಾಗಿರಲಿಲ್ಲ. ಅದೇ ರೀತಿಯಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದ ಪವಿತ್ರನ್ ಎಂಬುವರ ಕುಟುಂಬ ಒಂದೊತ್ತಿನ ಊಟಕ್ಕೂ ಪರದಾಡಿತ್ತು. ದುಡಿದು ದಿನ್ನೋದಕ್ಕೂ ಅವಕಾಶ ಇಲ್ಲದಿದ್ದರಿಂದ ತೀವ್ರ ಸಂಕಷ್ಟ ಅನುಭವಿಸಿತ್ತು. ಆದರೆ ಲಾಕ್​ಡೌನ್ ಸಂದರ್ಭದಲ್ಲಿ ರಂಜಾನ್ ಉಪವಾಸ ಆಚರಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ನೋಡಿದ್ದ ಪವಿತ್ರನ್ ಕುಟುಂಬ ತಾವೂ ಉಪವಾಸ ಮಾಡಲು ನಿರ್ಧರಿಸಿತ್ತು.

ಮುಸ್ಲಿಂ ಕುಟುಂಬಗಳು ಉಪವಾಸ ಮಾಡುವುದಾದರೆ ನಾವು ಯಾಕೆ ಉಪವಾಸ ಮಾಡಬಾರದು ಎಂದು ಪವಿತ್ರನ್ ಮತ್ತು ಅವರ ಇಬ್ಬರು ಹೆಣ್ಣು ನಿರ್ಧರಿಸಿದ್ದರು. ಪವಿತ್ರನ್ ಮತ್ತು ಮಕ್ಕಳು ಕಳೆದ ವರ್ಷದ ಲಾಕ್​ಡೌನ್ ನಲ್ಲಿ ಉಪವಾಸ ಆರಂಭಿಸಿ ನಾಕ್ ಮುಗಿಯುವವರೆಗೆ ಅದನ್ನು ಮುಂದುವರೆಸಿದ್ದರಂತೆ. ಲಾಕ್​ಡೌನ್ ಮುಗಿದ ಬಳಿಕ ಪವಿತ್ರನ್ ಅವರಿಗೆ ಸಾಕಷ್ಟು ಕೂಲಿ ಕೆಲಸಗಳು ದೊರೆತ್ತಿದ್ದವು. ಬಳಿಕ ದುಡಿದು ತಮ್ಮ ಹಸಿವು ನೀಗಿಸಿಕೊಂಡಿದ್ದರು. ಈಗ ಆಹಾರದ ಕೊರತೆ ಏನು ಇಲ್ಲ. ಆದರೂ ಪವಿತ್ರನ್ ಅವರ ಮಕ್ಕಳು ಕಳೆದ ಬಾರಿಯ ರಂಜನ್ ಸಂದರ್ಭದ ಉಪವಾಸವನ್ನು ನೆನೆದು ಈ ಬಾರಿಯೂ ಉಪವಾಸ ನಡೆಸುತ್ತಿದ್ದಾರೆ. ಕೊಡಗಿನಲ್ಲಿ ಕೊವಿಡ್ ಸೋಂಕು ಮಿತಿಮೀರಿರುವುದರಿಂದ ಜಿಲ್ಲಾಡಳಿತ ಜಿಲ್ಲೆಯಲ್ಲಿ ವಾರದ ಐದು ದಿನ ಲಾಕ್ ಡೌನ್ ಜಾರಿ ಮಾಡಿದೆ. ಹೀಗಾಗಿ ಮತ್ತೆಷ್ಟೋ ಕುಟುಂಬಗಳು ಜಿಲ್ಲೆಯಲ್ಲಿ ಉಪವಾಸದಿಂದ ಬಳಲುತ್ತಿರಬಹುದು.

ಕಳೆದ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿ ನಾವು ಹಸಿವಿನಿಂದ ಬಳಲಿ, ಕೊನೆಗೆ ಉಪವಾಸವನ್ನೇ ಒಂದು ಆಚರಣೆಯಾಗಿ ಮಾಡಿಕೊಂಡಿದ್ದು ಇನ್ನೂ ನೆನಪಿದೆ. ಹೀಗಾಗಿ ಈ ಬಾರಿ ನಮ್ಮ ಮಕ್ಕಳು ಉಪವಾಸ ಮುಂದುವರೆಸುತ್ತಿದ್ದಾರೆ ಎನ್ನುತ್ತಾರೆ ಪವಿತ್ರನ್. ಮುಂಜಾನೆ ಐದುವರೆಗೆ ಆಹಾರ ತಿನ್ನುವ ಪವಿತ್ರನ್ ಅವರ ಮಗಳು ಪ್ರಾಂಜನ್ ಮತ್ತು ಆಕೆಯ ತಂಗಿ ಇಬ್ಬರು ಇಡೀ ದಿನ ಉಪವಾಸ ಇರುತ್ತಿದ್ದಾರೆ.

ಬಳಿಕ ಸಂಜೆ ಆರುವರೆಗೆ ತಮ್ಮ ದೇವರಿಗೆ ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸಿ ಬಳಿಕ ಏನನ್ನಾದರು ತಿಂದು ಉಪವಾಸ ಕೈಬಿಡುತ್ತಿದ್ದಾರೆ. ಇವರ ಈ ಆಚರಣೆ ನೋಡಿದರೆ ಒಮ್ಮೆ ಯಾರಿಗಾದರೂ ಇವರು ಮತಾಂತರ ಆಗುತ್ತಿರಬಹುದೇನ್ನೋ ಎನ್ನೋ ಅನುಮಾನ ಕಾಡಬಹುದು. ಆದರೆ ಪವಿತ್ರನ್ ಅವರ ಮನೆಯ ಮುಂದೆ ತುಳಿಸಿಕಟ್ಟೆ ಇದ್ದು, ಇಂದಿಗೂ ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ.

ನಮಗೆ ಯಾವುದೇ ಜಾತಿ ಧರ್ಮದ ಹಂಗಿಲ್ಲ ಎನ್ನುತ್ತಾರೆ ಪವಿತ್ರನ್. ಒಟ್ಟಿನಲ್ಲಿ ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ತಾವು ಹಸಿವಿನಿಂದ ಬಳಲಿದ್ದನ್ನು ನೆನಪಿಸಿಕೊಂಡು ಈ ಕುಟುಂಬ ಇಂದಿಗೂ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದನ್ನು ರೂಢಿಸಿಕೊಂಡಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ