Breaking News
Home / ರಾಜ್ಯ / ವೃದ್ಧ ಬ್ರಾಹ್ಮಣರೊಬ್ಬರು ಮೃತರಾದಾಗ ಅವರ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಯುವಕನೊಬ್ಬ ನಡೆಸಿದ್ದಾರೆ.

ವೃದ್ಧ ಬ್ರಾಹ್ಮಣರೊಬ್ಬರು ಮೃತರಾದಾಗ ಅವರ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಯುವಕನೊಬ್ಬ ನಡೆಸಿದ್ದಾರೆ.

Spread the love

ಉಡುಪಿ: ವೃದ್ಧ ಬ್ರಾಹ್ಮಣರೊಬ್ಬರು ಮೃತರಾದಾಗ ಅವರ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಯುವಕನೊಬ್ಬ ನಡೆಸಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎರಡು ವರ್ಷಗಳ ಹಿಂದೆ ದೇವಸ್ಥಾನವೊಂದರ ಆವರಣದಲ್ಲಿ ಸಿಕ್ಕ ವೇಣುಗೋಪಾಲ್ ರಾವ್ ಅವರನ್ನು ಆಸಿಫ್ ತನ್ನ ಆಶ್ರಮದಲ್ಲಿ ಸಾಕಿ ಸಲಹಿದರು. ವೃದ್ಧರ ಮನೆಯವರನ್ನು ಸಂಪರ್ಕಿಸಿದಾಗ ಇವರನ್ನು ನೋಡಿಕೊಳ್ಳಲು ಯಾರೂ ಆಸಕ್ತಿ ತೋರಿರಲಿಲ್ಲ. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯಲ್ಲಿರುವ ತನ್ನ ಆಪದ್ಬಾಂಧವ ಆಶ್ರಮದಲ್ಲಿ ಇವರನ್ನು ಆಸಿಫ್ ನೋಡಿಕೊಳ್ಳುತ್ತಿದ್ದರು. ಎರಡು ವರ್ಷಗಳ ನಂತರ ಇತ್ತೀಚೆಗೆ ವೇಣುಗೋಪಾಲರಾವ್ ನಿಧನರಾದರು. ಆ ಸಂದರ್ಭದಲ್ಲಿಯೂ ಆಸಿಫ್ ಅವರ ಮನೆಯವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಅಂತಿಮ ಸಂಸ್ಕಾರ ನಡೆಸಲು ಮನೆಯವರು ಯಾರೂ ಮುಂದೆ ಬರದೆ ಇದ್ದಾಗ ಪೊಲೀಸರಿಂದ ಅನುಮತಿಯನ್ನು ಪಡೆದು ಆಸಿಫ್ ಅವರೇ ಅಂತಿಮ ಸಂಸ್ಕಾರ ನಡೆಸಿದ್ದಾರೆ.
ಮೂಲ್ಕಿಯ ಕಾರ್ನಾಡಿನಲ್ಲಿರುವ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ನಡೆಸಿಕೊಟ್ಟಿದ್ದಾರೆ. ಬಳಿಕ ಮಲ್ಪೆ ಸಮೀಪದ ವಡಬಾಂಡೇಶ್ವರ ಸಮುದ್ರದಲ್ಲಿ ಚಿತಾಭಸ್ಮವನ್ನು ಹಾಕಿದ್ದಾರೆ ಕರೊನಾ ಸಂದರ್ಭದಲ್ಲಿ ಅನೇಕ ಬಗೆಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆಪತ್ಬಾಂಧವ ಆಸಿಫ್ ಅವರು ಇದೀಗ ವೃದ್ಧ ಬ್ರಾಹ್ಮಣರೊಬ್ಬರ ಅಂತಿಮ ವಿಧಿವಿಧಾನಗಳನ್ನು ನಡೆಸಿ ಸಾಮರಸ್ಯದ ಜೊತೆಗೆ ಮಾನವೀಯತೆಯ ಕೆಲಸ ಮಾಡಿದ್ದಾರೆ

Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ