ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಕಂಡಿದ್ದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಸಾಕ್ಷಿ ಇದೆ ಎಂದು ಹೇಳುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬಳಿ 11 ಸಾಕ್ಷ್ಯಗಳಿವೆ. ಈ ಎಲ್ಲಾ ಸಾಕ್ಷ್ಯಗಳನ್ನು ಎಸ್ಐಟಿ ಅಧಿಕಾರಿಗಳಿಗೆ ನೀಡುವೆ . ಮಹಾನಾಯಕ ಡಿಕೆ ಶಿವಕುಮಾರ್ ಅವರೊಂದಿಗೆ ನೇರ ಹೋರಾಟಕ್ಕಿಳಿದು ಕನಕಪುರದಲ್ಲಿ ಸೋಲಿಸಲು ಹೋರಾಟ ಮಾಡುತ್ತೇನೆ . ಅವರು ರಾಜಕೀಯದಲ್ಲಿ ಇರಲು ಅಯೋಗ್ಯರು ಎಂದು ಕಿಡಿಕಾರಿದ್ದಾರೆ .
ಈ ಮಧ್ಯೆ , ಸುದ್ದಿಗೋಷ್ಠಿ ನಡೆಸಿದ ಸಿಡಿ ಯುವತಿ ಪೋಷಕರು , ಡಿಕೆ ಶಿವಕುಮಾರ್ ಅವರು ಆಕೆಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ . ಅವಳನ್ನು ಗೋವಾಕ್ಕೆ ಕಳುಹಿಸುವುದಾಗಿ ಹೇಳದ್ದರು ಎಂದು ಡಿಕೆಶಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ