ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಿರುವ ರೈತ ಸಂಘಟನೆಗಳು ಮಾರ್ಚ್ 26 ರ ನಾಳೆ ಸಂಪೂರ್ಣ ಭಾರತ್ ಬಂದ್ ಗೆ ಕರೆ ನೀಡಿವೆ.
40 ರೈತ ಸಂಘಗಳ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದ್ದು, ಕಾರ್ಮಿಕ ಸಂಘಗಳು, ಸಾರಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘಗಳು ಮತ್ತು ಇತರೆ ಸಾಮೂಹಿಕ ಸಂಸ್ಥೆಗಳು ಭಾರತ್ ಬಂದ್ ಗೆ ಬೆಂಬಲ ನೀಡಿವೆ.
ಈ ಬಾರಿ ಭಾರತ್ ಬಂದ್ ಪರಿಣಾಮ ದೆಹಲಿಯಲ್ಲಿಯೂ ಕಂಡು ಬರುತ್ತದೆ. ಕಾರ್ಮಿಕ ಸಂಘಗಳು, ಸಾರಿಗೆ ಸಂಘಗಳು ಮತ್ತು ಮಾರುಕಟ್ಟೆ ಸಂಘಗಳು ಬಂದ್ ಗೆ ಬೆಂಬಲ ನೀಡುತ್ತವೆ. ಸರ್ಕಾರವುಉ ಮಾತುಕತೆಗೆ ಸಿದ್ದರಿದ್ದರೆ ನಾವು ಸಹ ಸಿದ್ದರಾಗಿದ್ದೇವೆಎ ಎಂದು ರಾಷ್ಟ್ರೀಯ ರೈತ ಒಕ್ಕೂಟದ ವಕ್ತಾರ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ಅಭಿಮನ್ಯು ಹೇಳಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿ ವಿರೋಧಿಸಿ ರೈತರು ಮಾರ್ಚ್ 26, ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ರೈತ ಮುಖಂಡರಾದ ದರ್ಶನ್ ಪಾಲ್ ಮತ್ತು ರಾಕೇಶ್ ಟಿಕೈಟ್ ನೇತೃತ್ವದಲ್ಲಿ ನಡೆದ ‘ವಿಧಾನ ಸೌಧ ಚಲೋ’ ಕಾರ್ಯಕ್ರಮದಲ್ಲಿ ಈ ಕರೆ ನೀಡಲಾಗಿದೆ