ಬೆಂಗಳೂರು : ಸಿಡಿ ವಿಚಾರದಲ್ಲಿ ನಾನೂ ಕೂಡಾ ಸದನದ ಚರ್ಚೆಯಲ್ಲಿ ಭಾಗವಹಿಸಬೇಕಿತ್ತು, ಆದರೆ ಹಿರಿಯರು ಬೇಡ ಎಂದಿದ್ದಕ್ಕೆ ಸುಮ್ಮನಾದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಆ ಹುಡುಗಿ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಆಕೆ ಒತ್ತಾಯದಿಂದ ಮಾತನಾಡಿದ್ದಾಳೋ, ಅಥವಾ ಸ್ವ-ಇಚ್ಛೆಯಿಂದ ಮಾತನಾಡಿದ್ದಾಳೋ ಗೊತ್ತಿಲ್ಲ. ಆದರೆ ಸಿಡಿಯಲ್ಲಿ ಇರುವ ದೃಶ್ಯ ಅಸಲಿಯೋ, ನಕಲಿಯೋ ಗೊತ್ತಿಲ್ಲ ಎಂದರು.
ತನಿಖೆ ಆಗುವವರೆಗೂ ವಿರೋಧ ಪಕ್ಷ ಕೂಡ ಸಹಕರಿಸಬೇಕು. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಹಕರಿಸಿ. ಅತ್ಯಾಚಾರ ಎಂಬ ಪದವನ್ನು ಬಳಸಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡ್ತೀನಿ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.