ಬೆಂಗಳೂರು: ಬಗೆದಷ್ಟೂ ಆಳ ಎಂಬಂತೆ ತನಿಖೆ ಮುಂದುವರಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಕೇಸ್ನ ಲೀಕಾಸುರರ ಎಕ್ಸ್ಕ್ಲೂಸಿವ್ ಮಾಹಿತಿ ಲಭ್ಯವಾಗುತ್ತಲೇ ಇದೆ.
ಸಿಡಿ ಲೀಕ್ ಆದಾಗಿನಿಂದ ಊರೂರು ಸುತ್ತುತ್ತಿರುವ ಕಿಂಗ್ಪಿನ್, ಹ್ಯಾಕರ್, ಯುವತಿ ಸದ್ಯ ರಾಜಸ್ಥಾನದಲ್ಲಿದ್ದಾರೆ ಎನ್ನಲಾಗಿದೆ. ಇನ್ನು ಸಿಡಿ ಬಹಿರಂಗದ ಬಳಿಕ ಸಿಡಿ ಗ್ಯಾಂಗ್ ನಡೆಸಿದ್ದ ತಂತ್ರ ಏನು? ಹ್ಯಾಕರ್ ಶ್ರವಣ್ ಯಾವ ರೀತಿ ಪ್ಲಾನಿಂಗ್ ಮಾಡಿಕೊಂಡಿದ್ದ? ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಎಸ್ಐಟಿ ತನಿಖೆ ವೇಳೆ ಹ್ಯಾಕರ್ ಶ್ರವಣ್ ಸಂವಹನ ನಡೆಸಲು ಹೊಸ ತಂತ್ರ ಅನುಸರಿಸಿದ್ದರ ಬಗ್ಗೆ ಗೊತ್ತಾಗಿದೆ. ವಾಟ್ಸ್ಆಯಪ್, ಫೇಸ್ಬುಕ್ ಬಳಿಕ ಸಿಗ್ನಲ್ನಲ್ಲಿ ಮಾತುಕತೆ ನಡೆಸಿದ್ದಾರೆ. ಪೊಲೀಸರು ಫೋನ್ ಟ್ರ್ಯಾಪ್ ಮಾಡಬಹುದೆಂಬ ಕಾರಣಕ್ಕೆ ಹ್ಯಾಕರ್ನಿಂದ ಸಿಡಿ ಗ್ಯಾಂಗ್ಗೆ ಹೊಸ ಸಂದೇಶ ಬಂದಿತ್ತು. ಅದರಂತೆ ಸಂವಹನ ನಡೆಸಲು ಮಾ.2ರಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಶ್ರವಣ್, ಕಿಂಗ್ಪಿನ್ ನರೇಶ್ಗೌಡ ಅವರು ತಮ್ಮ ಮೊಬೈಲ್ನಲ್ಲಿ ಸಿಗ್ನಲ್ ಆಯಪ್ ಇನ್ಸ್ಟಾಲ್ ಮಾಡಿಕೊಂಡಿದ್ದರು.
ನಾರ್ಮಲ್ ಕಾಲ್ನಲ್ಲಿ ಮಾತನಾಡಿದ್ರೆ ಗೌಪ್ಯ ಬಯಲಾಗುತ್ತೆ ಅನ್ನೋ ಕಾರಣಕ್ಕೆ ಗುಪ್ತವಾಗಿ ಮಾತನಾಡಲು ವಾಟ್ಸ್ಆಯಪ್ ಅಥವಾ ಫೇಸ್ಬುಕ್ ಬಳಸಿದ್ದರು. ಮಾ.2ರಂದು ಸಿಗ್ನಲ್ ಆಯಪ್ ಇನ್ಸ್ಟಾಲ್ ಮಾಡಿಕೊಂಡು ಮುಂದಿನ ನಡೆ ಕುರಿತು ಚರ್ಚಿಸಿದ್ದಾರೆ. ಸಿಗ್ನಲ್ ಆಯಪ್ ಮೂಲಕವೇ ಸಂದೇಶವನ್ನ ರವಾನೆ ಮಾಡಿಕೊಳ್ಳುತ್ತಿದ್ದರು. ತುರ್ತಾಗಿ ಮಾತನಾಡಬೇಕಿದ್ರೆ ಸಿಗ್ನಲ್ ಆಯಪ್ನಲ್ಲೇ ಕರೆ ಮಾಡಿ ಮಾಹಿತಿ ಮಿನಿಮಯ ಮಾಡಿಕೊಳ್ಳುತ್ತಿದ್ದರು.