ದಾವಣಗೆರೆ: ನಿನಗೆ ಸವಾಲು ಹಾಕ್ತೀನಿ.. ತಾಕತ್ತಿದ್ದರೆ ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡಿ ನೋಡು ಅಂತ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳೆಗೆ ಸವಾಲೆಸೆದಿದ್ದಾರೆ.
ಪಂಚರಾಜ್ಯಗಳ ಚುನಾವಣೆಯ ನಂತರ ನೂರಕ್ಕೆ ನೂರರಷ್ಟು ಸಿಎಂ ಬದಲಾವಣೆ ಖಚಿತ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ರೇಣುಕಾಚಾರ್ಯ ಏಕವಚನದಲ್ಲೇ ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ, ಅನಂತಕುಮಾರ್. ಯಡಿಯೂರಪ್ಪನವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಅಮಿತ್ ಶಾ.. ನೀನಲ್ಲ. ನೀನು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀಯ, ನೀನೇ ದೊಡ್ಡ ಭ್ರಷ್ಠ. ಹೆಂಡತಿ ಮಕ್ಕಳನ್ನ ಹೊರಗೆ ಕಳುಹಿಸಿ ರಾಜಕೀಯ ಮಾಡು ನೋಡಣ, ನೀನೇನು ಒರಿಜಿನಲ್ ಬಿಜೆಪಿಯವನಾ..? ನೀನು ಕಾಂಗ್ರೇಸ್ ಏಜೆಂಟ್ನ ಹಾಗೆ ಮಾತನಾಡುತಿದ್ದೀಯಾ, ನಿನ್ನ ಹೇಳಿಕೆಗಳ ಹಿಂದೆ ಕಾಂಗ್ರೆಸ್ನವರ ಕೈವಾಡವಿದೆ ಎಂದು ಹರಿಹಾಯ್ದರು
ವಿಧಾನಸಭೆ ಮೊಗಸಾಲೆಯಲ್ಲಿ 20 ರಿಂದ 25 ಜನ ಶಾಸಕರು ಕುಳಿತು ಮಾತನಾಡಿದ್ದೇವೆ, ಯತ್ನಾಳ್ರನ್ನ ಬಿಜೆಪಿಯಿಂದ ಉಚ್ಛಾಟನೆ ಮಾಡಲು ನಾನು ಒತ್ತಾಯ ಮಾಡಿದ್ದೇನೆ. ನಾಳೆ ಸೋಮವಾರ ಎಲ್ಲಾ ಶಾಸಕರು ಸೇರುತ್ತೇವೆ. ನಿನಗೆ ಸರಿಯಾದ ಉತ್ತರವನ್ನ ಕೊಡುತ್ತೇವೆ. ನಿನಗೆ ತಾಖತ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಗೆದ್ದು ಬಾ ನೋಡೋಣ ಎಂದು ಏಕವಚನದಲ್ಲಿ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ರು.