ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಷಡ್ಯಂತ್ರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದು ಕೊಳ್ಳುತ್ತಿದ್ದೆ. ಇದಕ್ಕೆ ದಿನ ಕಳೆದಂತೆ ಹೊಸ ಬೆಳವಣಿಗೆ ಗಳು ಬೆಳಕಿಗೆ ಬರುತ್ತಿದ್ದು ರಮೇಶ್ ಜಾರಕಿಹೊಳಿ ಅವರು ಆದಷ್ಟು ಬೇಗ ಇದರಿಂದ ಹೊರಬರಲಿದ್ದಾರೆ ಎಂಬ ಸುಳಿವು ಸಿಗುತ್ತದೆ.
ಇನ್ನು ರಮೇಶ್ ಜಾರಕಿಹೊಳಿಯವರ ಬೆನ್ನಿಗೆ ಮೊದಲನೆ ದಿನದಿಂದ ಬಾಲಚಂದ್ರ ಜಾರಕಿಹೊಳಿ ಅವರು ನಿಂತರೆ ದಿನ ಕಳೆದ ಹಾಗೆ ಎಲ್ಲ ಕುಟುಂಬದ ಸದಸ್ಯರು ಇವರನ್ನ ಭೇಟಿ ಮಾಡಿ ವಿಷಯದ ನಾವಿದ್ದೇವೆ ನಿಮ್ಮ ಜೊತೆ ಅಂತಾ ಅವರ ಹಿರಿಯ ಪುತ್ರ ಶ್ರೀ ಸಂತೋಷ್ ಜಾರಕಿಹೊಳಿ ಅವರು ಭೇಟಿ ನೀಡಿದ್ರೆ ಇವತ್ತು ಅವರ್ ಸಹೋದರ ಲಖನ್ ಜಾರಕಿಹೊಳಿ ಅವರು ಭೇಟಿ ಮಾಡಿ ಸಹೋದರನ ಜೊತೆ ಮಾತುಕತೆ ನಡೆಸಿದ್ದಾರೆ.
ಇನ್ನು ಒಂದು ಕಡೆ S.I.T. ತಂಡ ದಿನ ದಿಂದ ದಿನಕ್ಕೆ ತನಿಖೆ ಚುರುಕು ಗೊಳಿಸಿದ್ದು ಆದಷ್ಟು ಬೇಗ ಎಲ್ಲ ಆರೋಪಗಳು ಸುಳ್ಳು ಎಂದು ಸಾಬೀತಾಗಿ ಇದೊಂದು ಷಡ್ಯಂತ್ರ ಅನ್ನುವ ಸತ್ಯ ಹೊರಕ್ಕೆ ಬರಲು ಬಹುಶಃ ಇನ್ನೇನು ಜಾಸ್ತಿ ದಿನಗಳು ಬೇಕಾಗಿಲ್ಲ ಎಂಬ ಮಾತು ಅವರ್ ಅಭಿಮಾನಿ ವಲಯದಲ್ಲಿ ಶುರುವಾಗಿದೆ.
ಒಟ್ಟಾರೆ ಸಂತೋಷ್ ಜಾರಕಿಹೊಳಿ ,ಲಖನ ಜಾರಕಿಹೊಳಿ, ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಬೆನ್ನಿನ ಹಿಂದೆ ನಿಂತು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಮಾನಿ ವಲಯದಲ್ಲಿ ಮಾತು ಶುರುವಾಗಿದೆ