ಬೆಂಗಳೂರು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವ್ರು ಇಂದು ವಲಯವಾರು ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿದ್ದು, ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಹವಾಳಿಯನ್ನ ಹತೋಟಿಗೆ ತರಲು ಬಿಬಿಎಂಪಿ ಮುಂದಾಗಿದೆ.
ಸಭೆಯ ಮಾತನಾಡಿದ ಆಯುಕ್ತರು, ‘ ಸೋಂಕು ಪತ್ತೆಯಾದ ಕೂಡಲೇ ಅವ್ರ ಜೊತೆ ಸಂಪರ್ಕದಲ್ಲಿ ಇರೋರನ್ನ ಪತ್ತೆ ಹಚ್ಚಿ. ಸೋಂಕಿತರ ಮೊಬೈಲ್ ನಂಬರ್, ಪಿನ್ ನಂಬರ್, ಅಡ್ರೆಸ್ ನಂಬರ್ ತೆಗೆದುಕೊಂಡು ಹುಡುಕಿ. ನೀವು ಸರಿಯಾಗಿ ಅಡ್ರೆಸ್ ತೆಗೆದುಕೊಳ್ಳದಿದ್ರೆ ಕಾಂಟ್ಯಾಕ್ಟ್ ಮಿಸ್ ಆಗುತ್ತೆ. ನಿರ್ಲಕ್ಷ್ಯ ಮಾಡಿದ್ರೆ, ನೀವೇ ಹೊಣೆ ಎಂದು ಕಮಿಷನರ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.