ಗೋಕಾಕ: ರಮೇಶ್ ಜಾರಕಿಹೊಳಿ ಅವರ ಮೇಲೆ ಹೊರಸಿದ ಸಿಡಿ ಪ್ರಕರಣದ ಬಗ್ಗೆ ದಿನದಿಂದ ದಿನಕ್ಕೆ ಹೊಸ ಬೆಳವಣಿಗೆ ಗಳು ಕಂಡು ಬರುತ್ತಿವೆ. ದಿನ ಕಳೆದಂತೆ ಸಾಹುಕಾರರ ಮೇಲೆ ಜನರ ಪ್ರೀತಿ ವಿಶ್ವಾಸ ಜಾಸ್ತಿ ಆಗುತ್ತಿದೆ.
ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆ ಯದ್ಯಂತ ಪ್ರತಿಭಟನೆ ಗಳ ಮೇಲೆ ಪ್ರತಿಭಟನೆ ನಡೆಯುತ್ತಿದ್ದು ಇಂದು ಗೋಕಾಕ ನಗರದ ನಾವಿಕ ಅಭಿವೃದ್ಧಿ ಸಂಘ ಒಂದು ಹೊಸ ಪ್ರಯತ್ನ ವನ್ನಾ ಮಾಡಿದ್ದಾರೆ.
ಸಾಹುಕಾರರು ಕ್ಷೇತ್ರದ ಹಾಗೂ ಜನರ ಅಭಿವೃದ್ಧಿ ಕಾರ್ಯಗಳನ್ನ ಗಮನಿಸಿ ಗೋಕಾಕ ಸವಿತಾ ನಾಭಿಕ ಅಭಿವೃದ್ಧಿ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಹಮ ತುಮ್ ಹಾರೆ ಸಾಥ ಸಾಥ್ ಹೈ ಅಂತ ಪೋಸ್ಟರ್ ಗಳನ್ನ ಮಾಡಿ ಎಲ್ಲ ಕಡೆ ಅಂಟಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ಪ್ರತಿಭಟನೆ, ಹಾಗೂ ಸುಮಾರು ಕಡೆ ಈ ಒಂದು ಷಡ್ಯಂತ್ರ ದ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಇನ್ನು ಈ ಒಂದು ಸಂದರ್ಭದಲ್ಲಿ ಗೋಕಾಕ ನಾವಿಕ ಅಭಿವೃದ್ಧಿ ಸಂಘದ ಯುವ ಘಟಕದ ಅಧ್ಯಕ್ಷರಾದ, ರವಿ ರಾಹುತ್, ಉಪಾಧ್ಯಕ್ಷರಾದ, ಸೂರಜ್ , ಸೌರಭ, ಹಾಗೂ ಇನ್ನಿತರ ಸಂಘದ ಸದಸ್ಯರು ಭಾಗವಹಿಸಿದ್ದರು.
ಇನ್ನು ಈ ಎಲ್ಲ ಆರೋಪದಿಂದ ರಮೇಶ್ ಜಾರಕಿಹೊಳಿ ಅವರು ಶೀಘ್ರವೇ ಮುಕ್ತಿ ಹೊಂದಿ ನಮ್ಮ ಗೋಕಾಕ ನಗರಕ್ಕೆ ಬರಲಿ ಎಂದು ಆಶಿಸಿದ್ದಾರೆ..