ವಿಜಯಪುರ : ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು ಖಂಡಿತ ನಿಜ. ಕಾಂಗ್ರೆಸ್ ನ 15-20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೊಸ ಬಾಂಬ್ ಹಾಕಿದ್ದಾರೆ.
ಇಲ್ಲನ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಆದ್ರೆ ಸಧ್ಯ ನಮಗೆ ಅವಶ್ಯಕತೆ ಇಲ್ಲ ಎಂದು ನಾವೇ ಸುಮ್ಮನಾಗಿದ್ದೀವಿ, ಆದರೂ ಅವರೇ ನಮಗೆ ಕೇಳ್ತಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ಅಸಮಧಾನವಿದ್ದಂತೆ ಕಾಣ್ತಿದೆ, ಮುಂದೆ ಚುನಾವಣೆಯಲ್ಲಿ ಅವರನ್ನ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ, ಅವರೇ ನಮ್ಮ ಕಡೆಗೆ ಬರ್ತೀವಿ ಎನ್ತಿದ್ದಾರೆ ಎಂದಿದ್ದಾರೆ