ಬೆಂಗಳೂರು: ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ ಎಂಆರ್ ಬ್ಯಾನರ್ ನಲ್ಲಿ ತೆರೆಗೆ ಬರಲು ಮುಹೂರ್ತ ಆಚರಿಸಲಾಗಿತ್ತು. ಆದರೆ ಇದೀಗ ಈ ಸಿನಿಮಾಗೆ ಕಂಟಕ ಎದುರಾಗಿದೆ.
ಮುತ್ತಪ್ಪ ರೈ ಈ ಹಿಂದೆ ನನ್ನ ಸಿನಿಮಾ ಅಥವಾ ಬುಕ್ ಬರೆಯುವ ಮುನ್ನ ಕುಟುಂಬದವರನ್ನು ಕೇಳಬೇಕೆಂದು ವಿಲ್ ಬರೆದಿದ್ದರು. ಆದರೆ ಎಂಆರ್ ಸಿನಿಮಾವನ್ನು ರವಿ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದು, ಇವರು ಕುಟುಂಬಸ್ಥರನ್ನು ಕೇಳದೆ ಸಿನಿಮಾ ಮಾಡಿದ್ದಾರೆ ಎಂದು ಫಿಲಂ ಚೇಂಬರ್ ಮತ್ತು ನಿರ್ಮಾಪಕ ಸಂಘಕ್ಕೆ ಜಯಕರ್ನಾಟಕ ಸಂಘಟನೆ ದೂರು ದಾಖಲಿಸಿದೆ.
ಇದರ ಬೆನ್ನಲ್ಲೇ ಎಂಆರ್ ಬ್ಯಾನರ್ನ ಸಂಸ್ಥಾಪಕ ಪದ್ಮನಾಭ್ ನಾಳೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಎಂಆರ್ ಸಿನಿಮಾ ರವಿಶ್ರೀವತ್ಸ ನಿರ್ದೇಶನದಲ್ಲಿ ಶೋಭಾ ರಾಜಣ್ಣ ನಿರ್ಮಾಣದಲ್ಲಿ ಕೆಲದಿನಗಳ ಹಿಂದೆ ಆರ್ ಆರ್ ನಗರದ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡಿತ್ತು.