ಮೂರು ದಿನದಲ್ಲಿ ಸಾರಿಗೆ ಇಲಾಖೆಗೆ 17 ಕೋಟಿ ಲಾಸ್
ಬೆಂಗಳೂರು: ಕಳೆದ ಮೂರು ದಿನಗಳಿಂದ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದಿಂದಾಗಿ ರಾಜ್ಯಾದ್ಯಂತ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಆದಾಯಕ್ಕೆ ಭಾರೀ ನಷ್ಟ ಉಂಟಾಗಿದೆ.
ರಾಜ್ಯದಾದ್ಯಂತ ಪ್ರತಿ ದಿನ ಸಾರಿಗೆ ಇಲಾಖೆಗೆ ಸುಮಾರು 7 ಕೋಟಿ ರೂ. ಆದಾಯ ಬರುತ್ತಿತ್ತು. ಆದ್ರೆ ಮುಸ್ಕರ್ ಆರಂಭದ ಮೊದಲ ದಿನ ರಾಜ್ಯಾದ್ಯಂತ 1464 ಬಸ್ ಗಳು ಸಂಚಾರ ಮಾಡಿದ್ದು, ಒಟ್ಟು 4.5 ಕೋಟಿ ರೂ. ನಷ್ಟವಾಗಿದೆ. ಇನ್ನು ಎರಡನೇ ದಿನ 210 ಬಸ್ ಸಂಚರಿಸಿದ ಹಿನ್ನೆಲೆ 6.5 ಕೋಟಿ ನಷ್ಟವಾಗಿದೆ.
ಇಂದು ಈ ವರೆಗೂ ಕೇವಲ 100 ಬಸ್ ಸಂಚಾರ ಆರಂಭಿಸಿವೆ ಇದೇ ಪರಿಸ್ಥಿತಿ ಮುಂದವರೆದರೆ ಇಂದು ಕೂಡಾ 6 ಕೋಟಿ ನಷ್ಟ ಉಂಟಾಗುವ ಸಾಧ್ಯತೆ ಇದೆ.
ಒಟ್ಟಾರೆ ಈ ಮೂರುದಿನದ ಮುಷ್ಕರದಿಂದಾಗಿ ಕೆಎಸ್ಆರ್ಟಿಸಿ ವಿಭಾಗಕ್ಕೆ ಒಟ್ಟು 17 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
ಈ ಮೂರು ದಿನದ ಮುಷ್ಕರದಿಂದಾಗಿ ಪ್ರತಿನಿತ್ಯ 2- 2.10.ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದ ಬಿಎಂಟಿಸಿಗೆ ಒಟ್ಟು, 6 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
ರಾಜ್ಯದ ಎರಡನೇ ರಾಜ್ಯದಾನಿಯಾಗಿರುವ ಬೆಳಗಾವಿ ಜಿಲ್ಲೆವೊಂದರಲ್ಲಿಯೇ ಸುಮಾರು 2 ಕೋಟಿ. ರೂ ಆದಾಯ ಹೊಡೆತ ಬಿದ್ದಿದೆ.