Breaking News
Home / ರಾಜಕೀಯ / ರಮೇಶ್ ಜಾರಕಿಹೊಳಿ ಸರ್ಕಾರ ತೆಗೆಯಲು ಕೈಹಾಕಿ ಹಾಕಿದಾಗ ಗೇಟ್ ಕೀಪರ್ ಕೆಲ್ಸ ಮಾಡಿದೊನೆ C.P.Y : HDK

ರಮೇಶ್ ಜಾರಕಿಹೊಳಿ ಸರ್ಕಾರ ತೆಗೆಯಲು ಕೈಹಾಕಿ ಹಾಕಿದಾಗ ಗೇಟ್ ಕೀಪರ್ ಕೆಲ್ಸ ಮಾಡಿದೊನೆ C.P.Y : HDK

Spread the love

ರಾಮನಗರ (ಚನ್ನಪಟ್ಟಣ): ಕಲ್ಚರ್ ಇಲ್ಲದ ಜನರ ಬಗ್ಗೆ ನಾನೇಕೆ ಚರ್ಚೆ ಮಾಡಲಿ, ಅವರ ಬ್ಯಾಕ್ ಗ್ರೌಂಡ್ ಏನು, ಎಷ್ಟು ಜನರಿಗೆ ಟೋಪಿ ಹಾಕಿ ಬಂದಿದ್ದಾರೆಂದು ನನಗೆ ಗೊತ್ತು ಎಂದು ಬಿಜೆಪಿ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ಗ್ರಾ.ಪಂ ಚುನಾವಣೆ ಹಿನ್ನೆಲೆ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಇದಕ್ಕಿಂತ ಮುಂಚೆ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ಡಿಕೆ,  ಯೋಗೇಶ್ವರ್ ರಾಜಕೀಯಕ್ಕೆ ಬರುವ ಮುಂಚೇನೆ ನನಗೆ ಚನ್ನಪಟ್ಟಣ  ಪರಿಚಯವಿತ್ತು. ವಿಠಲೇನಹಳ್ಳಿ ಗೋಲಿಬಾರ್ ಆದಾಗ ಇವನು ಎಲ್ಲಿದ್ದ. ಚನ್ನಪಟ್ಟಣದ ಹಳ್ಳಿಗಳ ಹೆಸರು ನಾನು ಹೇಳಬೇಕಾ ಇವನಿಗೆ, ಇದು ಅವನ ದುರಂಕಾರದ ಮಾತು ಎಂದು ಕುಮಾರಸ್ವಾಮಿ ಚನ್ನಪಟ್ಟಣದ 10 ಊರ ಹೆಸರೇಳಲಿ ಎಂದು ಸವಾಲು ಹಾಕಿದ್ದ ಯೋಗೇಶ್ವರ್​ಗೆ ಟಾಂಗ್,

ಇನ್ನು ನನ್ನಿಂದಲೇ ಹೆಚ್ಡಿಕೆ ಸರ್ಕಾರ ಅಧಿಕಾರ ಕಳೆದುಕೊಳ್ತು ಎಂದಿದ್ದ ಬಗ್ಗೆ ಮಾತನಾಡಿಇವನೇನು ದೊಡ್ಡ ಮಹಾನ್ ನಾಯಕನ. ಇವನು ಕೈಯಿಂದ ಹಣ ಖರ್ಚು ಮಾಡುತ್ತಾನಾ. ಯಾರಿಗೋ ಟೋಪಿ ಹಾಕಿ ಬಂದವನು ಇವನು, ತೆಂಗಿನಕಾಯಿ ಮಾರಿ ಹಣವನ್ನ ಪ್ರಿಂಟ್ ಮಾಡಿದ್ದಾನಾ ಇವನು. ತಾಲೂಕಿನ ಎಷ್ಟು ಜನರಿಗೆ ತೆಂಗಿನಕಾಯಿ ದುಡ್ಡು ಕೊಟ್ಟಿಲ್ಲವೋ ಗೊತ್ತಿಲ್ಲ. ಚನ್ನಪಟ್ಟಣದ ನೀರಾವರಿ ಯೋಜನೆಯ ಪೈಪ್ ಲೈನ್ ನಲ್ಲಿಯೂ ಹಣ ಹೊಡೆದ, ಪ್ರತಿಯೊಂದಕ್ಕೂ ಕಮಿಷನ್ ಪಡೆದಿದ್ದಾನೆ. ನಾನೇನು ಇವನ ರೀತಿ ರಾಜಕಾರಣ ಮಾಡ್ತಿದ್ದೀನಾ ಎಂದು ಕಿಡಿಕಾರಿದರು.

ದೇವೇಗೌಡರ ಕುಟುಂಬವನ್ನ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ಅವನ್ಯಾರೋ ರಮೇಶ್ ಜಾರಕಿಹೊಳಿ ಸರ್ಕಾರ ತೆಗೆಯಲು ಕೈಹಾಕಿದ್ದ, ಅವನ ಹಿಂದೆ ಇವನು ಗೇಟ್ ಕೀಪರ್ ಕೆಲಸ ಮಾಡಿಕೊಂಡು ಇದ್ದ. ಇವನನ್ನ ನೋಡಿ ಎಂ ಎಲ್ ಎ ಗಳು ಬಂದಿದ್ದಾರಾ ಎಂದರು.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ