ಬೆಳಗಾವಿಯ ಪ್ರಸಿದ್ಧ ಸಮಾಜಸೇವಕ ಕಿರಣ ನಿಪ್ಪಾಣಿಕರ್ ಇನ್ನಿಲ್ಲ
ಬೆಳಗಾವಿ-ಕ್ರೀಯಾಶೀಲ ಸಮಾಜ ಸೇವಕ ಬೆಳಗಾವಿ ಪಾಲಿಕೆ ಮುಖ್ಯ ಇಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ ಅವರ ಸಹೋದರ ಕಿರಣ ನಿಪ್ಪಾಣಿಕರ್ ನಿನ್ನೆ ತಡರಾತ್ರಿ ವಾರಣಾಸಿಯಲ್ಲಿ ನಿಧನರಾಗಿದ್ದಾರೆ.
ಮಹಾಕುಂಭದಲ್ಲಿ ಪುಣ್ಯಸ್ನಾನ ಮುಗಿಸಿ ವಾರಣಾಸಿಗೆ ಹೋಗಿದ್ದ ಕಿರಣ ನಿಪ್ಪಾಣಿಕರ್ ಅವರು ಹೃದಯಾಘಾತದಿಂದ ಅಸ್ವಸ್ಥರಾಗಿದ್ದರು ವಾರಣಾಸಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಆದ್ರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
ನಾಳೆ ಬೆಳಗ್ಗೆ ವಿಮಾನ ಮೂಲಕ ಕಿರಣ ನಿಪ್ಪಾಣಿಕರ್ ಅವರ ಪಾರ್ಥೀವ ಶರೀರ ಬೆಳಗಾವಿಗೆ ತರಲಾಗುತ್ತಿದೆ.
Laxmi News 24×7