ರಾಯಬಾಗ: ‘ಕೊರೊನಾ ಸಂಕಷ್ಟದಲ್ಲೂ ಅಂಗನವಾಡಿ ಕಾರ್ಯಕರ್ತೆಯರು ಜೀವದ ಹಂಗು ತೊರೆದು ನಿರ್ವಹಿಸಿದ ಕಾರ್ಯಕ್ಕೆ ಸರ್ಕಾರವು ಮೆಚ್ಚುಗೆ ವ್ಯಕ್ತಪಡಿಸಿ ಹೆಚ್ಚಿನ ಜವಾಬ್ದಾರಿ ನೀಡಿದೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೇಂದ್ರದ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ಪ್ರತಿ ದಿನ ಕಳುಹಿಸಲು ಸರ್ಕಾರದಿಂದ ಸ್ಮಾರ್ಟ್ ಫೆÇೀನ್ಗಳನ್ನು ವಿತರಿಸಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ಮಾರ್ಟ್ ಫೆÇೀನ್ಗಳನ್ನು ಕಾರ್ಯಕರ್ತೆಯರಿಗೆ ವಿತರಿಸಿ ಅವರು ಮಾತನಾಡಿದರು.
ಶ್ರೀದೇವಿ ಜಾಧವ, ಅರ್ಚನಾ ಕುಲಕರ್ಣಿ, ಮೇಲ್ವಿಚಾರಕಿಯರಾದ ಎಸ್.ಎಸ್. ಪಾಟೀಲ, ಕಾಂಬಳೆ, ಉಮಾ ಗಡಕರಿ, ಮಹಾದೇವಿ ತರಾಳ, ಶಾಜಾದ ಜಮಾದಾರ, ಎಸ್.ಎಸ್. ದೊಡಮನಿ, ಸಿಡಿಪಿಒ ಸಂತೋಷ ಕಾಂಬಳೆ, ಪೆÇೀಷಣ್ ಅಭಿಯಾನದ ಸಂಯೋಜಕ ಅನ್ನಪೂರ್ಣಾ ಘಟನಟ್ಟಿ, ಲಖನ್ ದುಂಡಗಿ, ಇಂದಿರಾ ಅಸ್ಕಿ, ಜಿ.ಕೆ. ಭಾರತಿ ಮುರನಾಳ, ಶೀಲಾ ಕುಲಕರ್ಣಿ, ಇದ್ದರು.