ಹುಬ್ಬಳ್ಳಿ : ನರಗುಂದ ತಾಲೂಕಿನ ಕೋಣ್ಣೂರು ಗ್ರಾಮದ ಬಸ್ ನಿಲ್ದಾಣವು ಅಸ್ವಚ್ಛತೆಯಿಂದ ಕೊಡಿದ್ದು, ಇಲ್ಲಿ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರು ದುರ್ವಾಸನೆಯಿಂದ ಕಂಗಾಲಾಗಿದ್ದಾರೆ.
ಕೊಣ್ಣೂರು ಗ್ರಾಮ ದೊಡ್ಡ ಗ್ರಾಮವಾಗಿದ್ದು ಇದು ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದೆ. ಇಲ್ಲಿಂದ ದಿನನಿತ್ಯ ಬೇರೆ ಬೇರೆ ಗ್ರಾಮಗಳಿಗೆ ಪ್ರಯಾಣಿಕರು ತೆರಳುತ್ತಾರೆ ಆದರೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಶೌಚಾಲಯವಿದ್ದರು ಅವು ಅಸ್ವಚ್ಛತೆಯಿಂದ ಕೊಡಿ ಗಬ್ಬುನಾರುತ್ತಿವೆ.
ಕೊರೊನಾ ಸೋಂಕಿನಿಂದ ಭಯಗೊಂಡ ಜನರು ಮತ್ತೆ ಅಸ್ವಚ್ಛತೆಯಿಂದ ರೋಗ ತಗುಲುವು ಭಯದಲ್ಲಿಯೇ ಇದ್ದಾರೆ. ಜತೆಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಸ್ವಚ್ಛತೆಯಿಂದ ಕುಡಿರುವ ಕೊಣ್ಣೂರು ಬಸ್ ನಿಲ್ದಾಣವನ್ನು ಸ್ವಚ್ಛತೆ ಕಾಪಾಡಬೇಕು. ಕೂಡಲೇ ಮೂಲ ಸೌಕರ್ಯವನ್ನು ಒದಗಿಸಬೇಕು ಎಂದು ಶಿವಚಿದಂಬರ ಶಿಕ್ಷಣ ಗ್ರಾಮೀಣಾಭಿವೃದ್ದಿ ಅಧ್ಯಕ್ಷ ಚಿದಂಬರ ಪಿ ನಿಂಬರಗಿಯವರು ಆಗ್ರಹಿಸಿದ್ದಾರೆ.