Home / ಜಿಲ್ಲೆ / ಬೆಂಗಳೂರು / ವರ ನಟ ಡಾ.ರಾಜ್‍ಕುಮಾರ್ ಕುರಿತ 209 ಪಂಚಪದಿ ಕೃತಿ ಲೋಕಾರ್ಪಣೆ

ವರ ನಟ ಡಾ.ರಾಜ್‍ಕುಮಾರ್ ಕುರಿತ 209 ಪಂಚಪದಿ ಕೃತಿ ಲೋಕಾರ್ಪಣೆ

Spread the love

ಬೆಂಗಳೂರು, ನ.22- ವರನಟ ಡಾ.ರಾಜ್‍ಕುಮಾರ್‍ರವರ ಚಿತ್ರ ಜೀವನಕ್ಕೆ ಸಂಬಂಸಿದಂತೆ, ಅವರು ನಟಿಸಿರುವ ಮೊದಲನೇ ಚಿತ್ರ ಬೇಡರ ಕಣ್ಣಪ್ಪದಿಂದ ಹಿಡಿದು ಕೊನೆಯ ಚಿತ್ರ ಶಬ್ದವೇದಿವರೆಗಿನ 209 ಚಲನಚಿತ್ರಗಳಿಗೆ ಸಂಬಂಸಿದ 209 ಪಂಚಪದಿ ಕೃತಿ ಲೋಕಾರ್ಪಣೆಗೊಂಡಿದೆ.

ಹಾಲುವಾಗಿಲು ಮಂಜುನಾಥ್ ವಿರಚಿತ ರಾಜ್ ಕುರಿತ 209 ಪಂಚಪದಿ ಕೃತಿಯನ್ನು ರಾಜ್ ಕುಟುಂಬ ವರ್ಗದವರು ಸೇರಿದಂತೆ ನೂರು ಮಹನೀಯರು, 100 ಸ್ಥಳಗಳಲ್ಲಿ ಏಕ ಕಾಲಕ್ಕೆ ಲೋಕಾರ್ಪಣೆ ಮಾಡಿದರು. ವಿಶ್ವದ ಯಾವುದೇ ಕಲಾವಿದನ ಬಗ್ಗೆ ಇದುವರೆಗೂ ಬರೆಯಲಾಗದಂತಹ ಕೃತಿಯನ್ನು ಅದ್ಭುತವಾಗಿ ಬರೆದಿರುವ ಮಂಜುನಾಥ್ ಹಾಲುವಾಗಿಲು ಅವರ ರಾಜಕುಮಾರ ಪಂಚಪದಿ ಕೃತಿಯನ್ನು ಸ್ನೇಹ ಪ್ರಕಾಶನ ಹೊರ ತಂದಿದೆ.

ಭಾರತ ದೇಶದ ಸಾಹಿತ್ಯ ಕ್ಷೇತ್ರದ ಇತಿಹಾಸದಲ್ಲಿ ಈ ಕ್ಷಣದವರೆಗೂ ಯಾವುದೇ ಪುಸ್ತಕ ಬಿಡುಗಡೆಯಾಗದ ರೀತಿಯಲ್ಲಿ ಸಮಾಜದ ನೂರಾರು ಮಂದಿ ಗಣ್ಯಾತಿಗಣ್ಯರು ಈ ಪುಸ್ತಕವನ್ನು 100 ಪ್ರತ್ಯೇಕ ಸ್ಥಳಗಳಲ್ಲಿ ಬಿಡುಗಡೆ ಮಾಡಿರುವುದು ಅತ್ಯಂತ ವಿಶೇಷ.

ಸಿದ್ಧಗಂಗಾ ಶ್ರೀಗಳು, ಬರಗೂರು ರಾಮಚಂದ್ರಪ್ಪ, ಪ್ರೊ.ಸಿದ್ಧಲಿಂಗಯ್ಯ, ಜರಗನಹಳ್ಳಿ ಶಿವಶಂಕರ್, ಅರಳುಮಲ್ಲಿಗೆ ಪಾರ್ಥಸಾರಥಿ, ಚಕ್ರವರ್ತಿ ಸೂಲಿಬೆಲೆ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣï, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನವರಸ ನಾಯಕ ಜಗ್ಗೇಶ್, ನೆನಪಿರಲಿ ಪ್ರೇಮï, ಧೃವ ಸರ್ಜಾ, ಯುವರಾಜ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್, ಮಾಜಿ ಮೇಯರ್,


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ