ನವದೆಹಲಿ: ರಾಜ್ಯಸಭೆಯಲ್ಲಿ ಅಶಿಸ್ತಿನ ನಡುವಳಿಕೆ ತೋರಿದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅವರನ್ನು ಗುರುವಾರ ಅಧಿವೇಶನದ ಇನ್ನುಳಿದ ಅವಧಿ ವರೆಗೆ ಅಮಾನತು ಮಾಡಲಾಯಿತು.
ಗುರುವಾರ ಕಲಾಪ ಶುರುವಾಗುತ್ತಿದ್ದಂತೆ ನಿನ್ನೆ ನಡೆದ ಸಂಸತ್ ಭದ್ರತಾ ಲೋಪದ ಕುರಿತು ಚರ್ಚಿಸುವಂತೆ ಪಟ್ಟು ಹಿಡಿದ ಡೆರೆಕ್ ಒಬ್ರಿಯಾನ್ ದುರ್ವರ್ತನೆ ತೋರುವ ಮೂಲಕ ಸದನಕ್ಕೆ ಅಗೌರವ ತೋರಿದರು.
ಈ ಹಿನ್ನೆಲೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್, ಒಬ್ರಿಯಾನ್ಗೆ ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು. ಡೆರೆಕ್ ಒ’ಬ್ರೇನ್ ಅವರು ಅಧ್ಯಕ್ಷರನ್ನು ಧಿಕ್ಕರಿಸುವುದಾಗಿ ಹೇಳಿದರು. ಇದರಿಂದ ಕೋಪಗೊಂಡ ಧನಕರ್, ಒಬ್ರಿಯಾನ್ ಸದನದ ನಿಯಮಗಳನ್ನು ಗೌರವಿಸುವುದಿಲ್ಲ. ಇದೊಂದು ಗಂಭೀರ ದುರ್ನಡತೆ. ಇದು ನಾಚಿಕೆಗೇಡಿನ ಘಟನೆಯಾಗಿದೆ ಎಂದು ಅಕ್ರೋಶ ಹೊರಹಾಕಿ, ಅಮಾನತು ಮಾಡಿದರು.