ಹಿಂದಿನ ಸರ್ಕಾರದಲ್ಲಿ ನಡೆದಿರುವ ಹಗರಣಗಳನ್ನು ಸಂಪೂರ್ಣವಾಗಿ ತನಿಖೆ ಮಾಡುತ್ತೇವೆ ಎಂದು’ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಾಧ್ಯಮದವರ ಜೊತೆಗೆ ಮಾತನಾಡಿದ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಲೋಕಸಭಾ ತಯಾರಿ ಇನ್ನೂ ನಡೆದಿಲ್ಲ , ಚುನಾವಣೆಗೆ ಇನ್ನು ಸಮಯವಿದೆ ,ಹಿಂದಿನ ಸರ್ಕಾರದಲ್ಲಿ ಕೋವಿಡ ಸಮಯದಲ್ಲಿ ಸುಮಾರು ಹಗರಣಗಳು ಆಗಿವೆ. ಹತ್ತು ರೂಪಾಯಿ ಮಾಸ್ಕನ್ನು ನೂರು ರೂಪಾಯಿಗೆ ಮಾರಿದ್ದಾರೆ ಅದರ ಬಗ್ಗೆ ತನಿಖೆಯಾಗಬೇಕು , ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು ,
ನಾವೂ ಯಾರೂ ಈ ಹಿಂದೆ ಪಕ್ಷ ಬಿಟ್ಟು ಹೋದವರನ್ನು ಮತ್ತೆ ಕರೆಸಿಕೊಳ್ಳುತ್ತೀಲ್ಲ, ಅವರಿಗೆ ತೊಂದರೆ ಕೂಡುವ ಪ್ರಶ್ನೆಯೆ ಬರಲ್ಲ ಸುಧಾಕರ ವಿರುದ್ದ ತನಿಖೆ ಮಾಡುತ್ತೇವೆ , ಅವರ ಮೇಲೆ ಭ್ರಷ್ಟಾಚಾರ ಆರೋಪವಿದೆ ,
ಇನ್ನೂ ಪ್ರಿಯಾಂಕಾ ಜಾರಕಿಹೊಳಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಮಾಧ್ಯಮದವರ ಪ್ರಶ್ನೆಗೆ ಈ ಬಗ್ಗೆ ನಿರ್ಧಾರ ಮಾಡಿಲ್ಲ ನಮ್ಮಲ್ಲಿ ತುಂಬಾನೆ ಆಕಾಂಕ್ಷಿಗಳು ಇದ್ದಾರೆ , ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ನಡುವೆ ಯಾವದೇ ಮನಸ್ತಾಪವಿಲ್ಲ ನಾವೋ ಎಲ್ಲರೂ ಒಂದೇ ಎಂದು ಹೇಳಿದ್ದರು .
ನೈತಿಕ ಪೊಲೀಸಗಿರಿ ಬಗ್ಗೆ ಉತ್ತರಿಸಿದ ಸಚಿವರು ಜಿಲ್ಲೆಯಲ್ಲಿ ನೈತಿಕ ಪೊಲೀಸಗಿರಿ ಅವಕಾಶವಿಲ್ಲ , ಹಿಂಡಿಲಗಾ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ನೀಡಿರುವುದು ಬಗ್ಗೆ ಎಸ್.ಪಿ ನೋಡಿಕೊಳ್ಳುತ್ತಾರೆ ಎಂದು ಹೇಳಿದರು