ಗೋಕಾಕ : ಕರ್ನಾಟಕ ರಾಜ್ಯೋತ್ಸವದ ಹಿನ್ನಲೆಯಲ್ಲಿ ರಿಯಾಜ್ ಚೌಗಲಾ ನಿರ್ದೇಶನದಲ್ಲಿ ಮೂಡಿದ ಕನ್ನಡ ಆಲ್ಬಮ್ ಸಾಂಗ್ ಗಳನ್ನು ರಾಹುಲ್ ಜಾರಕಿಹೊಳಿ ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಇಂದು ಬಿಡುಗಡೆಗೊಳಿಸಿದರು.
‘ನಾಡ ತಾಯಿಯ ಉತ್ಸವ ನೋಡ ಬನ್ನಿ, ವೈಭವ. ಕನ್ನಡ ಕೀರ್ತಿ ಬೆಳೆಸುವ ಉತ್ಸವ’ ಹಾಗೂ ‘ಬದುಕು ಕಲಿಸಿದ ಭಾಷೆ ಕನ್ನಡ, ಹೃದಯ ತಟ್ಟಿದ ಭಾಷೆ ಕನ್ನಡ’ ಎಂಬ ಎರಡು ಕನ್ನಡ ಆಲ್ಬಮ್ ಸಾಂಗ್ ಗಳನ್ನು ಉತ್ತಮ ತಂಡ ರಚಿಸಿದ್ದಾರೆ.
ಈ ಎರಡು ಆಲ್ಬಮ್ ಸಾಂಗ್ ಗಳಿಗೆ ರಿಯಾಜ್ ಚೌಗಲಾ ನಿರ್ದೇಶನ, ಅಕ್ಷಯ್ ಕುಮಾರ್ ಸಾಹಿತ್ಯ, ಶಿವಾಜಿ ಪಾಟೀಲ್ ರೆಕಾರ್ಡಿಂಗ್ ಮಾಡಿದ್ದಾರೆ. ರೂಪ ಕಡಗಾವಿ, ಓಂಕಾರ್ ಪತ್ತಾರ್ ಧ್ವನಿ ನೀಡಿದ್ದಾರೆ. ವಿಡಿಯೋ ಸಂಕಲನ ತನೀಶ ಜೋರಾಪುರ ಮಾಡಿದ್ದಾರೆ.
ಎರಡು ಗೀತೆಗೆಳು ರಾಜ್ಯೋತ್ಸವದ ಹಿನ್ನಲೆ ಯೂ ಟುಬ್ ನಲ್ಲಿ ಭಾರೀ ಸದ್ದು ಮಾಡುತ್ತಿವೆ.