ಗೋಕಾಕ: ಡಿಸಿಸಿ ಬ್ಯಾಂಕ್ ಚುನಾವಣೆ ಯಾವುದೇ ಪಕ್ಷದ ಆಧಾರಿತವಲ್ಲ, ಬದಲಾಗಿ ಕೆಲವರ ವೈಯಕ್ತಿಕವಾಗಿ ಮೂರು ಸ್ಥಾನಗಳಿಗೆ ಸ್ಪರ್ಧೆ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ತಮ್ಮ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಈಗಾಗಲೇ ಸಂಘ- ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದವರು ಅವಿರೋಧವಾಗಿ ಆಯ್ಕೆಯಾಗಿದೆ. ಮೂರಕ್ಕೆ ಚುನಾವಣೆ ನಡೆಯುತ್ತಿದೆ. ಅದು ಅವರವರ ವೈಯಕ್ತಿಕವಾಗಿದೆ ಎಂದಷ್ಟೇ ಹೇಳಿದರು.
ಕರ್ನಾಟಕದಲ್ಲಿ ಕನ್ನಡ-ಮರಾಠಿ ಸಮಸ್ಯೆ ಇಲ್ಲ:
ಹಾದಿ ಬೀದಿಯಲ್ಲಿ ನಿಂತು ಮನವಿ ಕೊಟ್ಟರೆ ಏನು ಆಗದು. ಕೆಲವು ಜನರು ತಮ್ಮ ರಾಜಕೀಯ ಸ್ವಾರ್ಥಕ್ಕೆ ಗಡಿ ವಿವಾದ ಬಳಸಿಕೊಳ್ಳುತ್ತಿದ್ದಾರೆ. ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಈಗಾಗಲೇ ಬಗೆಹರಿದಿದೆ. ಕರ್ನಾಟಕದಲ್ಲಿ ಕನ್ನಡ- ಮರಾಠಿ ಸಮಸ್ಯೆಯೇ ಇಲ್ಲ, ನಾವೆಲ್ಲ ಒಂದಾಗಿದ್ದೇವೆ ಎಂದು ಎಂಇಎಸ್ ಪುಂಡರಿಗೆ ತೀರುಗೇಟು ನೀಡಿದರು