Breaking News
Home / ರಾಜಕೀಯ / ದಿವಂಗತ ನಟ ಪುನೀತ್​ ರಾಜ್​ಕುಮಾರ್​ಗೆ ‘ಕಿಚ್ಚ 46’ ಟೀಸರ್​ನಲ್ಲಿ ಗೌರವ ಸಲ್ಲಿಸದೇ ಇರುವುದು ನಿರ್ದೇಶಕ ದುನಿಯಾ ಸೂರಿ ಬೇಸರಕ್ಕೆ ಕಾರಣ

ದಿವಂಗತ ನಟ ಪುನೀತ್​ ರಾಜ್​ಕುಮಾರ್​ಗೆ ‘ಕಿಚ್ಚ 46’ ಟೀಸರ್​ನಲ್ಲಿ ಗೌರವ ಸಲ್ಲಿಸದೇ ಇರುವುದು ನಿರ್ದೇಶಕ ದುನಿಯಾ ಸೂರಿ ಬೇಸರಕ್ಕೆ ಕಾರಣ

Spread the love

ದಿವಂಗತ ನಟ ಪುನೀತ್​ ರಾಜ್​ಕುಮಾರ್​ಗೆ ‘ಕಿಚ್ಚ 46’ ಟೀಸರ್​ನಲ್ಲಿ ಗೌರವ ಸಲ್ಲಿಸದೇ ಇರುವುದು ನಿರ್ದೇಶಕ ದುನಿಯಾ ಸೂರಿ ಬೇಸರಕ್ಕೆ ಕಾರಣವಾಗಿದೆ.

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರ ಮುಂದಿನ ಸಿನಿಮಾದ ಬಗ್ಗೆ ಇಂದಿನವರೆಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು.

‘ಕಿಚ್ಚ 46’ ಅನ್ನೋದು ಸೋಷಿಯಲ್​ ಮೀಡಿಯಾದಲ್ಲಿ ಕೆಲ ದಿನಗಳಿಂದ ಟ್ರೆಂಡಿಂಗ್​ನಲ್ಲಿತ್ತು. ಸುದೀಪ್​ ಮುಂದಿನ ಸಿನಿಮಾದ ಲುಕ್​ ಹೇಗಿರಬಹುದು? ಅನ್ನೋ ಕ್ಯೂರಿಯಾಸಿಟಿ ಕನ್ನಡಿಗರಲ್ಲಿತ್ತು. ಇಂದು ನಟನ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಿಚ್ಚನ 46ನೇ ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ.

ಸಿನಿಮಾಗೆ K46 Demon War Begins ಎಂದು ಸದ್ಯಕ್ಕೆ ಟೈಟಲ್​ ಇಡಲಾಗಿದೆ. ರಿಲೀಸ್​ ಆಗಿರುವ ಪ್ರೋಮೋದಲ್ಲಿ ರಕ್ತಸಿಕ್ತ ದೃಶ್ಯದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ‘ನಾನು ಮನುಷ್ಯ ಅಲ್ಲ, ರಾಕ್ಷಸ’ ಎಂಬ ಡೈಲಾಗ್​ ಗಮನ ಸೆಳೆಯುತ್ತಿದೆ. ಕಲೈಪುಲಿ ಎಸ್​. ತನು ನಿರ್ಮಾಣದ ಸಿನಿಮಾಗೆ ವಿಜಯ್​ ಕಾರ್ತಿಕೇಯ ನಿರ್ದೇಶನ ಮಾಡಲಿದ್ದಾರೆ.

ಸದ್ಯ ಈ ಸಿನಿಮಾದ ಟೀಸರ್​ನಲ್ಲೊಂದು ಲೋಪ ಎದ್ದು ಕಾಣುತ್ತಿದೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಎದ್ದಿವೆ. ದಿವಂಗತ ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಗೆ ಟೀಸರ್​ನಲ್ಲಿ ಗೌರವ ಸಲ್ಲಿಸದೇ ಇರುವುದು ಅಪ್ಪು ಅಭಿಮಾನಿಗಳನ್ನು ಕೆಣಕಿದೆ. ಟೀಸರ್​ ಶುರುವಿನಿಂದ ಕೊನೆಯವರೆಗೂ ಎಲ್ಲೂ ಪರಮಾತ್ಮನಿಗೆ ಶ್ರದ್ಧಾಂಜಲಿ ಸಲ್ಲಿಸದೇ ಇರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

 

‘ಕಿಚ್ಚ 46ಗೆ ಧಿಕ್ಕಾರ..’ ಈ ಬಗ್ಗೆ ನಿರ್ದೇಶಕ ದುನಿಯಾ ಸೂರಿ (ಸುಕ್ಕ ಸೂರಿ) ಟ್ವೀಟ್​ ಮಾಡಿದ್ದು, ಮುಕ್ತವಾಗಿ ಕಿಚ್ಚ 46ಗೆ ಧಿಕ್ಕಾರ ಕೂಗಿದ್ದಾರೆ. “ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸದೇ ಟೀಸರ್​ ಬಿಡುಗಡೆ ಮಾಡಿರುವ ಕಿಚ್ಚ 46 ಚಿತ್ರಕ್ಕೆ ನನ್ನ ಧಿಕ್ಕಾರ” ಎಂದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕನ್ನಡಿಗರ ಕಣ್ಮಣಿ ಪುನೀತ್​ ರಾಜ್​ಕುಮಾರ್​ ಅವರ ಹಠಾತ್​ ಅಗಲಿಕೆ ಇಡೀ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಸಾಕಷ್ಟು ಸಿನಿಮಾಗಳನ್ನು ಸ್ಯಾಂಡಲ್​ವುಡ್​ಗೆ ಕೊಡುಗೆಯಾಗಿ ನೀಡಬೇಕೆಂದು ಕನಸು ಕಂಡಿದ್ದ ಪುನೀತ್​ ಅವರು ಸಾಧನೆಗೂ ಮುನ್ನವೇ ಮರೆಯಾಗಿ ಹೋದರು. ಇಂತಹ ಮಾಣಿಕ್ಯನ ನೆನಪಿಗಾಗಿ ಹಾಗೂ ನಗುಮುಖದ ಒಡೆಯನಿಗೆ ಗೌರವ ಸಲ್ಲಿಸುವ ಸಲುವಾಗಿ ಕನ್ನಡದ ಎಲ್ಲಾ ಚಿತ್ರಗಳಲ್ಲಿ ಟೀಸರ್​ನಿಂದ ಹಿಡಿದು ಸಿನಿಮಾದಲ್ಲೂ ಪುನೀತ್​ಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ