ಬೆಂಗಳೂರು: ಇಡ್ಲಿ, ವಡೆ ಮಿಸ್ ಮಾಡಿಕೊಳ್ತಿದ್ದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ರಾಜರಾಜೇಶ್ವರಿ ನಗರದ ಶೃಂಗಗಿರಿ ಷಣ್ಮುಖ ದೇವಸ್ಥಾನದಲ್ಲಿ ನಡೆದ ಆಪ್ತ ಧ್ರುವನ್ ಅವರ ಭಗವಾನ್ ಶ್ರೀಕೃಷ್ಣಪರಮಾತ್ಮ ಸಿನಿಮಾದ ಮುಹೂರ್ತದಲ್ಲಿ ದರ್ಶನ್ ಭಾಗಿಯಾಗಿದ್ದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಇಡ್ಲಿ,ವಡೆಯನ್ನೇ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಒಂದೊಂದೇ ಟಿಫನ್ ತಿಂದು ಬೇಜಾರಾಗಿದೆ. ಹೀಗಾಗಿ ಮನೆಯಲ್ಲಿ ಟಿಫನ್ ತಿನ್ನೋದೇ ಬಿಟ್ಟಿದ್ದೆ. ಶೂಟಿಂಗ್ ಆರಂಭವಾದ್ರೆ 4 ರೀತಿಯ ಟಿಫನ್ ಸಿಗುತ್ತೆ ಎಂದರು.
ಎಂಟು ತಿಂಗಳ ನಂತರ ಸಿನಿಮಾ ಚಟುವಟಿಕೆ ಆರಂಭ ಆಗಿರೋದು ಖುಷಿ ಕೊಟ್ಟಿದೆ. ಸೆಟ್ ಎಲ್ಲವೂ ಸರಿ ಹೋದ್ಮೇಲೆ ರಾಬರ್ಟ್ ರಿಲೀಸ್ ಆಗಲಿದೆ ಎಂದರು.