Breaking News
Home / ರಾಜಕೀಯ / ರಾಜ್ಯಾದ್ಯಂತ ನಿನ್ನೆ (ಬುಧವಾರ) ಲೋಕಾಯುಕ್ತ ಅಧಿಕಾರಿಗಳು ಕೆಲವು ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ

ರಾಜ್ಯಾದ್ಯಂತ ನಿನ್ನೆ (ಬುಧವಾರ) ಲೋಕಾಯುಕ್ತ ಅಧಿಕಾರಿಗಳು ಕೆಲವು ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ

Spread the love

ಬೆಂಗಳೂರು: ರಾಜ್ಯಾದ್ಯಂತ ನಿನ್ನೆ (ಬುಧವಾರ) ಲೋಕಾಯುಕ್ತ ಅಧಿಕಾರಿಗಳು ಕೆಲವು ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ವ್ಯಾಪಕ ಶೋಧ ನಡೆಸಿದ್ದರು.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೊಪ್ಪಳ, ಮಂಗಳೂರು, ಹಾವೇರಿ, ಉಡುಪಿ ಸೇರಿದಂತೆ ಒಟ್ಟು 57 ಕಡೆ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ಕೋಟಿ ಕೋಟಿ ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ.

ಅಧಿಕಾರಿಗಳು, ಅಕ್ರಮ ಸಂಪತ್ತು:

  • ಬೆಸ್ಕಾಂ ಚೀಫ್​ ಇಂಜಿನಿಯರ್​ಎಚ್.ಜೆ. ರಮೇಶ್ – ನಾಲ್ಕು ಕಡೆ ಪರಿಶೀಲನೆ. ಒಟ್ಟು 5.6 ಕೋಟಿ ರೂ ಮೌಲ್ಯದ ಆಸ್ತಿ ಪತ್ತೆ
  • ಟಿ.ಬಿ. ನಾರಾಯಣಪ್ಪ, ಡೆಪ್ಯೂಟಿ ಡೈರೆಕ್ಟರ್ ಆಫ್ ಫ್ಯಾಕ್ಟರೀಸ್, ಕಾರ್ಮಿಕ ಭವನ – ಹತ್ತು ಸ್ಥಳಗಳಲ್ಲಿ ದಾಳಿ. ಒಟ್ಟು ₹2.5 ಕೋಟಿಯಷ್ಟು ಆಸ್ತಿ ಪತ್ತೆ
  • ಎಸ್.ಡಿ. ರಂಗಸ್ವಾಮಿ, ಪಿಡಿಒ, ಕಿತ್ತನಹಳ್ಳಿ ಗ್ರಾಮ ಪಂಚಾಯಿತಿ – ಮೂರು ಕಡೆ ದಾಳಿ, ಒಟ್ಟು ₹ 2.5 ಕೋಟಿ ಆಸ್ತಿ ಪತ್ತೆ.
  • ಎನ್.ಜಿ. ಪ್ರಮೋದ್ ಕುಮಾರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಬಿಬಿಎಂಪಿ – 5 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ, ಒಟ್ಟು ₹ 8 ಕೋಟಿ ಮೌಲ್ಯದ ಆಸ್ತಿ ಪತ್ತೆ.
  • ಎನ್. ಮುತ್ತು, ಚೀಫ್ ಅಕೌಂಟ್ ಆಫೀಸರ್, ಮೈಸೂರು ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ – ಮೂರು ಕಡೆ ದಾಳಿ, ₹2.70 ಕೋಟಿ ಮೌಲ್ಯದ ಆಸ್ತಿ ಪತ್ತೆ
  • ಜೆ. ಮಹೇಶ್, ಸೂಪರಿಂಟೆಂಡೆಂಟ್ ಇಂಜಿನಿಯರ್, ಡೆಪ್ಯೂಟಿ ಕಮಿಷನರ್ ಆಫೀಸ್, ಮೈಸೂರು – ಮೂರು ಕಡೆ ದಾಳಿ, ₹2.5 ಕೋಟಿ ಮೌಲ್ಯದ ಆಸ್ತಿ ಪತ್ತೆ.
  • ಎ.ಎನ್. ನಾಗೇಶ್, ಎಇಇ ಮೈಸೂರು ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ – ಮೂರು ಕಡೆ ದಾಳಿ, ₹2.30 ಕೋಟಿ ಆಸ್ತಿ ಪತ್ತೆ
  • ಎನ್. ಶಂಕರಮೂರ್ತಿ, ಸೀನಿಯರ್ ಸಬ್ ರಿಜಿಸ್ಟರ್, ನಂಜನಗೂಡು. ಮೂರು ಕಡೆ ದಾಳಿ, ಒಟ್ಟು ₹2.63 ಕೋಟಿ ಆಸ್ತಿ ಪತ್ತೆ
  • ಶಂಕರ್ ನಾಯಕ್, ಜ್ಯೂನಿಯರ್ ಇಂಜಿನಿಯರ್, ಆರ್ ಡಿ ಪಿಆರ್, ಶಿಕಾರಿಪುರ – ಲೋಕಾಯುಕ್ತ ಅಧಿಕಾರಿಗಳಿಂದ ಮುಂದುವರೆದ ದಾಳಿ.
  • ಕೆ.ಪ್ರಶಾಂತ್, ಸೂಪರಿಂಟೆಂಡೆಂಟ್ ನೀರಾವರಿ ನಿಗಮ, ಶಿವಮೊಗ್ಗ – ಐದು ಕಡೆ ದಾಳಿ, ₹3.20 ಕೋಟಿ ಮೌಲ್ಯದ ಆಸ್ತಿ ಪತ್ತೆ
  • ಡಿ.ಆರ್.ಕುಮಾರ್, ಲೇಬರ್ ಆಫೀಸರ್ ಮಣಿಪಾಲ್ – ಎರಡು ಕಡೆ ದಾಳಿ, ₹ 1.40 ಕೋಟಿ ಮೌಲ್ಯದ ಆಸ್ತಿ ಪತ್ತೆ
  • ಎ.ಎಂ. ನಿರಂಜನ್, ಸೀನಿಯರ್ ಭೂ ಗರ್ಭಶಾಸ್ತ್ರಜ್ಞ – ಎರಡು ಕಡೆ ದಾಳಿ, ಒಟ್ಟು ₹3.66 ಕೋಟಿ ಮೌಲ್ಯದ ಆಸ್ತಿ ಪತ್ತೆ.
  • ವಾಗೀಶ್ ಬಸವಾನಂದ ಶೆಟ್ಟರ್, ಪ್ರಾಜೆಕ್ಟ್ ಇಂಜಿನಿಯರ್, ನಿರ್ಮಿತಿ ಕೇಂದ್ರ ಹಾವೇರಿ – ಮೂರು ಕಡೆ ದಾಳಿ, ಒಟ್ಟು ₹ 4.75 ಕೋಟಿ ಮೌಲ್ಯದ ಆಸ್ತಿ ಪತ್ತೆ.
  • ಜರನಪ್ಪ ಎಂ. ಚಿಂಚಿಲೀಕರ್, ಎಕ್ಸಿಕ್ಯುಟಿವ್ ಇಂಜಿನಿಯರ್, ಕೆಆರ್ ಐಡಿಎಲ್, ಕೊಪ್ಪಳ – ಐದು ಕಡೆ ದಾಳಿ, ಒಟ್ಟು ₹ 3.5 ಕೋಟಿ ಮೌಲ್ಯದ ಆಸ್ತಿ ಪತ್ತೆ
  • ಸಿ.ಎನ್. ಮೂರ್ತಿ, ಎಕ್ಸಿಕ್ಯುಟಿವ್ ಇಂಜಿನಿಯರ್, ಕೆಐಎಡಿಬಿ ಮೈಸೂರು – ನಾಲ್ಕು ಕಡೆ ದಾಳಿ, ಒಟ್ಟು ₹3.5 ಕೋಟಿ ಮೌಲ್ಯದ ಆಸ್ತಿ ಪತ್ತೆ

ಉಳಿದಂತೆ, ಆರೋಪಿತರ ವಿರುದ್ಧ ವಿಚಾರಣೆ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ